ಮಡಂತ್ಯಾರು: ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ ಕಾರ್ಯ

0

ಮಡಂತ್ಯಾರು: ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಾದ ಸತೀಶ್ ಸಾಲುಮರ ಮತ್ತು ನವಾಜ್ ಸಾಲುಮರ ಇವರು ಮಡಂತ್ಯಾರು, ಬಳ್ಳಮಂಜ ರಸ್ತೆಯ ಅಪಾಯಕಾರಿ ಹೊಂಡಗಳನ್ನು ಕಲ್ಲು, ಮಣ್ಣು ಹಾಕಿ ಮುಚ್ಚಿ ಸಾರ್ವಜನಿಕರಿಗೆ ವಾಹನ ಓಡಾಡಲು ಅನುಕೂಲ ಮಾಡಿಕೊಟ್ಟರು.

ಈ ರಸ್ತೆಯಲ್ಲಿ ಇತ್ತೀಚಿಗೆ ರಸ್ತೆ ಅಪಘಾತಗಳು ಅತಿಯಾಗುತ್ತಿದ್ದು ಇದನ್ನು ಮನಗಂಡು ತಮ್ಮ ರಿಕ್ಷದಲ್ಲಿ ಕಲ್ಲುಗಳನ್ನು ಹೊತ್ತು ತಂದು ತಮ್ಮ ಸಮಾಜ ಸೇವೆಯನ್ನು ಮಾಡಿದರು.

ಸಾರ್ವಜನಿಕರು ಇವರ ಕೆಲಸವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here