ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಹಬ್ಬದ ಉದ್ಘಾಟನಾ ಸಮಾರಂಭ

0

ಬೆಳ್ತಂಗಡಿ: ಕಳೆದ 78 ವರ್ಷಗಳಿಂದ ಮುಳಿಯ ಸಂಸ್ಥೆಯ ಕರಿಮಣಿ ಉತ್ಸವ, ಡೈಮಂಡ್ ಉತ್ಸವ, ಬಲೆ, ನೆಕ್ಲೇಸ್ ಹಬ್ಬ ನಡೆಸಿ ಗ್ರಾಹಕರಿಗೆ ನಗುಮೊಗದ ಸೇವೆ ನೀಡುವ ಪ್ರಸಿದ್ದಿಯನ್ನು ಪಡೆದಿದೆ.

ಹಲವು ಕಡೆ ಮುಳಿಯ ಸಂಸ್ಥೆ ತೆರೆದಾಗ ಉದ್ಯೋಗ ಕೂಡ ಹೆಚ್ಚಾಗುತ್ತಾ ಹೋಗುತ್ತಾದೆ.ಮುಳಿಯ ಸಂಸ್ಥೆಯನ್ನು ನಂಬಿ ಹಲವು ಜನರು ಜೀವನ ನಡೆಸುತ್ತಿದ್ದಾರೆ ಬೆಳೆಯುತ್ತಿರುವ ಉಜಿರೆಯಲ್ಲಿ ಮುಳಿಯದ ಇನ್ನೊಂದು ಶಾಖೆ ಪ್ರಾರಂಭಿಸಿ ಇನ್ನಷ್ಟು ಉದ್ಯೋಗ ಸೃಷ್ಟಿಯಾಗಲಿ ಎಂದು ಉಜಿರೆ ಬೆನಕ ಹೆಲ್ತ್ ಸೆಂಟರ್ ನ ಪಬ್ಲಿಕ್ ರಿಲೇಶನ್ಸ್ ಆಫೀಸರ್ ಎಸ್.ಜಿ.ಭಟ್ ಮಾ.20ರಂದು ಬೆಳ್ತಂಗಡಿ ಮುಳಿಯ ಡೈಮಂಡ್ ಪೆಸ್ಟ್ ಉದ್ಘಾಟಿಸಿ ಮಾತನಾಡಿದರು.

ಕಿರುತೆರೆ ಕಲಾವಿದೆ ದೀಪ ಕಟ್ಟೆ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿ ಚಿನ್ನಾಭರಣಗಳ ಪರಿಶುದ್ದತೆ ಮತ್ತು ನಂಬಿಕೆಗೆ ಇನ್ನೊಂದು ಹೆಸರು ಮುಳಿಯ ಸಂಸ್ಥೆ. ಮುಳಿಯದಲ್ಲಿ ಉತ್ತಮವಾದ ಕಲೆಕ್ಷನ್ ಮತ್ತು ಡಿಸೈನ್ ಇದೆ, ಗ್ರಾಹಕರಿಗೆ ಆಭರಣದ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿದೆ. ಇಲ್ಲಿ ಸಿಬ್ಬಂದಿಗಳು ಗ್ರಾಹಕರಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದನೆಯನ್ನು ನೀಡುತ್ತಾರೆ. ನನಗೆ ಇಲ್ಲಿಗೆ ಬಂದು ತುಂಬಾ ಖುಷಿಯಾಯಿತು ಎಂದರು.

ವೇದಿಕೆಯಲ್ಲಿ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಶಿವಕೃಷ್ಣ ಮೂರ್ತಿ, ಪ್ರೊಡೆಕ್ಟ್ ಮ್ಯಾನೇಜರ್ ಪ್ರಶಾಂತ್ ಎಸ್ ಉಪಸ್ಥಿತರಿದ್ದರು.

ಸಿಬ್ಬಂದಿ ಜಯಲಕ್ಷ್ಮಿ ಪ್ರಾರ್ಥಿಸಿ, ಶಾಖಾ ಪ್ರಬಂಧಕ ಲೋಹಿತ್ ವಂದಿಸಿದರು.ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು.ಮುಳಿಯ ಜುವೆಲ್ಸ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here