ಸುರ್ಯ ಜಾತ್ರೋತ್ಸವಕ್ಕೆ ಚಾಲನೆ- ಜಾತ್ರೋತ್ಸವದ ಅಂಗವಾಗಿ ಧ್ವಜಾರೋಹಣ

0

ನಡ: ನಡ ಗ್ರಾಮದ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ವಾರ್ಷಿಕ ಜಾತ್ರಾ ಕಾರ್ಯಕ್ರಮವು ಮಾ.19ರಂದು ಆರಂಭಗೊಂಡಿತು.

ವೇದಮೂರ್ತಿ ಶ್ರೀನಿವಾಸ ಹೊಳ್ಳತಂತ್ರಿ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಅನಂತರಾಮ ಮಯ್ಯ ನೇತೃತ್ವದಲ್ಲಿ ಗಣಪತಿ ಹೋಮ, ನವಕ ಪ್ರಧಾನ ಕಲಶ ಅಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯ ಬಲಿ, ಅನ್ನ ಸಂತರ್ಪಣೆ ಮತ್ತಿತರ ವೈದಿಕ ವಿಧಿವಿಧಾನಗಳು ನೆರವೇರಿದವು.

ಕ್ಷೇತ್ರದ ಆನುವಂಶಿಕ ಆಡಳಿತ ಮೊಕೇಸರ ಡಾ.ಎಸ್.ಸತೀಶ್ಚಂದ್ರ ಸುರ್ಯಗುತ್ತು, ಪತ್ನಿ ಸಂದೀಪಾ ಹಾಗೂ ಕುಟುಂಬಸ್ಥರು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ, ನಡಗುತ್ತು ಧನಂಜಯ ಅಜ್ರಿ, ಮುನಿರಾಜ್ ಅಜ್ರಿ, ಸಂಗ್ರಾಮ್, ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ನಡಕ್ಕರ, ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡೆಟ್ನಾಯ, ತಿಮ್ಮಪ್ಪಗೌಡ ಕಡೆತ್ಯಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here