ಮತಾಂತರ ನಿಷೇಧ ಕಾಯ್ದೆ ರದ್ದು :ಕೆ.ಎಸ್.ಎಂ.ಸಿ.ಎ ಸ್ವಾಗತ

0

ಬೆಳ್ತಂಗಡಿ: ಬಹು ಚರ್ಚಿತ, ವಿವಾದಾತ್ಮಕ ಹಾಗೂ ಸಂವಿಧಾನ ವಿರೋಧಿ ಮತಾಂತರ ನಿಷೇದೆ ಕಾಯ್ದೆಯನ್ನು ತರಾತುರಿಯಲ್ಲಿ ಅಲ್ಪ ಸಂಖ್ಯಾತರನ್ನೇ ಗುರಿಯಾಗಿಸಿ, ಬಿಜೆಪಿ ಸರಕಾರ ಜಾರಿಗೆ ತಂದು ಅಲ್ಪ ಸಂಖ್ಯಾತರು ದಲಿತರು ಹಾಗೂ ಜನ ಸಾಮಾನ್ಯರ ಮೂಲ ಸ್ವಾತಂತ್ರ್ಯವನ್ನೇ ಕಸಿಯುವ ಈ ಕಾಯ್ದೆ ಹಿಂಪಡೆಯಲು ರಾಜ್ಯ ಸರಕಾರ ಕೈಗೊಂಡಿರುವ ಕ್ರಮವನ್ನು ಕೆ.ಎಸ್.ಎಂ.ಸಿ.ಎ ನಿರ್ದೇಶಕರಾದ ವಂದನಿಯ ಶಾಜಿ ಮಾತ್ಯು ಸ್ವಾಗತಿಸಿದ್ದಾರೆ.

ಬಿಜೆಪಿ ಸರಕಾರ ಜಾರಿಗೊಳಿಸಿದ ಮತಾಂತರ ನಿಷೇದ ಕಾಯ್ದೆ ಇಲ್ಲ ಸಲ್ಲದ ಆರೋಪಗಳನ್ನು ಹೋರಿಸಿ ಅಲ್ಪ ಸಂಖ್ಯಾತರನ್ನು ಗುಲಾಮ ಗಿರಿಗೆ ತಳ್ಳುವ ಪ್ರಯತ್ನ ಮತ್ತು ಸಂವಿಧಾನ ನೀಡಿರುವ ವ್ಯಕ್ತಿ ಹಾಗೂ ಆರಾದನ ಸ್ವಾತಂತ್ರ್ಯ ದಮನಗೊಳಿಸುವ ಉದ್ದೇಶ ಈ ಕಾಯ್ದೆಯಲ್ಲಿತ್ತು ಎಂದು ವಂದನಿಯ ಶಾಜಿ ಮಾತ್ಯು ತಿಳಿಸಿದರು.

LEAVE A REPLY

Please enter your comment!
Please enter your name here