
ಬೆಳ್ತಂಗಡಿ: ಜು.26ರಂದು ತಡರಾತ್ರಿಯಲ್ಲಿ ಉಂಟಾದ ಭಾರಿ ಗಾಳಿಗೆ ತಾಲೂಕಿನ ಉಜಿರೆ – ಧರ್ಮಸ್ಥಳ ರಸ್ತೆಯ ಕನ್ಯಾಡಿ 2 ಎಂಬಲ್ಲಿ ಮರಗಳು ಧರೆಗೆ ಉರುಳಿದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ತಕ್ಷಣ ಕನ್ಯಾಡಿ ಫ್ರೆಂಡ್ಸ್ ಸದಸ್ಯರು ಹಾಗೂ ಸ್ಥಳೀಯರು ಕಾರ್ಯಪ್ರವೃತ್ತರಾಗಿ ತೆರವು ಕಾರ್ಯಾಚರಣೆ ಮುಂದುವರೆಸಿದ್ದಾರೆ.