ನಾವೂರು: ಕೈಕಂಬ ಬಳಿ ರಸ್ತೆಗೆ ಬಿದ್ದ ಮರ: ತೆರವು ಕಾರ್ಯಾಚರಣೆ

0

ಬೆಳ್ತಂಗಡಿ: ಜು.24ರಂದು ರಾತ್ರಿ ಸುರಿದ ಭಾರಿ ಮಳೆಗೆ ಬೆಳ್ತಂಗಡಿ-ಕಿಲ್ಲೂರು ಹೆದ್ದಾರಿಯ ಕೈಕಂಬ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿದ ತಕ್ಷಣ ಗ್ರಾಮ ಪಂಚಾಯತ್ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರಾದ ಗಣೇಶ್ ಗೌಡ ನಾವೂರು ಹಾಗೂ ಸ್ಥಳೀಯರಾದ ಆದಂ ಕೈಕಂಬ, ಲೈನ್ ಮೆನ್ ಸುಧಾಕರ್, ಸಂತೋಷ್ ನೆರೋಲ್ದಪಲಿಕ್ಕೆ ಅವರು ಮರವನ್ನು ತೆರವುಗೊಳಿಸಲು ಸಹಕರಿಸಿದರು.

LEAVE A REPLY

Please enter your comment!
Please enter your name here