ಕಳೆoಜ: ಜೂ.13ರಂದು ಪಾದೆ ಕೃಷ್ಣಪ್ಪ ಗೌಡರ ತೋಟಕ್ಕೆ ಮರ ಬಿದ್ದಿದ್ದು, ಹಾನಿ ಉಂಟಾಗಿದೆ. ತೋಟದ ಒಳಗಡೆ ಹಾದು ಹೋಗಿದ್ದ ವಿದ್ಯುತ್ ತಂತಿಯು ತುಂಡಾಗಿದ್ದು ಸ್ಥಳಕ್ಕೆ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ತಂಡದ ಸದಸ್ಯರು ಆಗಮಿಸಿ ತೆರವಗೊಳಿಸುವ ಕಾರ್ಯ ಮಾಡಿದ್ದಾರೆ. ಕಾರ್ಯಚರಣೆಯಲ್ಲಿ ವಿಪತ್ತು ತಂಡದ ಸದಸ್ಯರಾದ ಧನಂಜಯ ಗೌಡ ವಲಚ್ಚಿಲ್, ಯೋಗೀಶ್ ಸಿಂಬೂಳ್, ಹರೀಶ್ ವಳಗುಡ್ಡೆ, ಕಾರ್ತಿಕ್ ಎಂ. ಬಿ. ಹಾಗೂ ಸ್ಥಳೀಯರಾದ ಸಂಜೀವ ದೇವಾಡಿಗ, ಕೃಷ್ಣಪ್ಪ ಗೌಡ, ಪವರ್ ಮ್ಯಾನ್ ವಸಂತ್ ಪಾಲ್ಗೊಂಡಿದ್ದರು.