ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಿಳಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷೆಯಾಗಿ ರಾಜೇಶ್ವರಿ ಚಂದ್ರಕಾಂತ್, ಕಾರ್ಯದರ್ಶಿಯಾಗಿ ಮೀನಾಕ್ಷಿ ನಾರ್ಣಪ್ಪ, ಕೋಶಾಧಿಕಾರಿಗಳಾಗಿ ಸುಮಾ ಜಯರಾಮ್

0

ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ಗ್ರಾಮ ಸಮಿತಿ ಸಹಯೋಗದಲ್ಲಿ ಮಹಿಳಾ ವೇದಿಕೆಯ ನೂತನ ಪದಗ್ರಹಣ ಸೆ.28ರಂದು ಉಜಿರೆ ಶಾರದ ಮಂಟಪದಲ್ಲಿ ಜರುಗಿತು.

ಮಹಿಳಾ ವೇದಿಕೆ ಅಧ್ಯಕ್ಷೆಯಾಗಿ ನಿವೃತ್ತ ಶಿಕ್ಷಕಿ ರಾಜೇಶ್ವರಿ ಚಂದ್ರಕಾಂತ್, ಕಾರ್ಯದರ್ಶಿಯಾಗಿ ಮೀನಾಕ್ಷಿ ನಾರ್ಣಪ್ಪ, ಕೋಶಾಧಿಕಾರಿಗಳಾಗಿ ಸುಮಾ ಜಯರಾಮ್, ಉಪಾಧ್ಯಕ್ಷರಾಗಿ ಕಾಂತಿ ಶ್ರೀಧರ್, ಭಾರತಿ ವೆಂಕಟರಮಣ, ಜೊತೆ ಕಾರ್ಯದರ್ಶಿಯಾಗಿ ಚೈತ್ರಶ್ರೀ ಶೈಲೇಶ್, ಜೊತೆ ಕೋಶಾಧಿಕಾರಿಯಾಗಿ ಮೋಹಿನಿ ವೆಂಕಪ್ಪ, ಸಂಚಾಲಕರಾಗಿ ರೇಷ್ಮಾ ಪುಷ್ಪಕರ, ಗೌರವ ಸಲಹೆಗಾರರಾಗಿ ಚೇತನ್ ಹರಿಶ್ಚಂದ್ರ ಸವಿತಾ ಜಯದೇವ್, ಶಶಿಕಲಾ ದೇವಪ್ಪ ಇವರನ್ನು ನೇಮಿಸಲಾಯಿತು.

ವಲಯ ಸಮಿತಿ ಪದಾಧಿಕಾರಿಗಳಾಗಿ ಕಿರಿಯಾಡಿ ಮಂಜುಳಾ ಸೀನಪ್ಪ, ಧನ್ಯ ಚಂದ್ರಶೇಖರ್, ಶಿವಾಜಿನಗರ ಶಶಿಕಲಾ ಮಹೇಶ್, ಪೂರ್ಣಿಮ ಯಶೋಧರ, ಕೋರಿಯಾರು ಸರೋಜಿನಿ ರಾಜಪ್ಪ, ನಳಿನಿ ಶಿವರಾಮ್, ಮುಂಡತ್ತೋಡಿ ಲಲಿತಾ ಕೆಂಪಯ್ಯ, ವಿದ್ಯಾ ಹರೀಶ್, ಮಲೆಬೆಟ್ಟು ನಾಗಮ್ಮ ಕೃಷ್ಣಪ್ಪ, ಜಯಂತಿ ಬಾಲಚಂದ್ರ, ಉಜಿರೆ ನಗರ ಜಯಶ್ರೀ ಪ್ರಕಾಶ್, ಸಂಗೀತ ಶೇಖರ್, ಚಾವಡಿ ಕುಸುಮ ಉಮೇಶ, ಸುಂದರಿ ಚಂದ್ರಶೇಖರ, ಅಜಿತ್ ನಗರ ದೀಪಿಕ ರಾಜೇಶ್, ಗೀತ ಗೋಪಾಲ್, ಕಲ್ಮಂಜ ಯಶೋಧ ಭದ್ರಯ್ಯ, ಹರಿಣಿ ಲೋಕಯ್ಯ, ಇಜ್ಜ ಹರ್ಷಲತಾ ರಮಾನಂದ, ಉಷಾ ಚಿನ್ಮಯಿ, ಅರಳಿ ಲೋಲಾಕ್ಷಿ ರಾಘವ, ಭಾಗಿರತಿ ವಿಜಯ ಇವರುಗಳನ್ನು ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಯಿತು.

ಜಯಶ್ರೀ ಪ್ರಕಾಶ್ ಅಪ್ರಮೇಯ ಸ್ವಾಗತಿಸಿ, ಪುಷ್ಪಲತಾ ಭರತ್ ಪ್ರಾರ್ಥಸಿ, ಶಶಿಕಲಾ ದೇವಪ್ಪ ವಂದಿಸಿದರು.

LEAVE A REPLY

Please enter your comment!
Please enter your name here