ಹೊಸಂಗಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸತ್ಯನಾರಾಯಣ ಪೂಜೆ, ವಾರ್ಷಿಕೋತ್ಸವ

0

ವೇಣೂರು: ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಹೊಸಂಗಡಿ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗು ಕ್ಲಬಿನ ವಾರ್ಷಿಕೋತ್ಸವ ಜಿಲ್ಲಾ ಪಂಚಾಯತ್ ನ ಮಾಜಿ ಧರಣೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಫೆ.24ರಂದು ನಡೆಯಿತು.

ಮುಖ್ಯ ಅಥಿತಿಗಳಾಗಿ ಕಾಶಿಪಟ್ನ ಪಂಚಾಯತ್ಅಧ್ಯಕ್ಷರು, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸತೀಶ್ ಬಂಗೇರ ಕಾಶಿಪಟ್ನ, ನಿವೃತ್ತ ಆಯುಕ್ತ ಅಚ್ಚುತ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಉದ್ಯಮಿ ಪ್ರಾಂಕಿ ಪಿಂಟೋ ಕಾಶಿಪಟ್ನ, ಶಂಭು ಎನ್ ಶೆಟ್ಟಿ ಮಾರೂರುಗುತ್ತು, ಲಿಂಗಪ್ಪ ಪೂಜಾರಿ ಪಾದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ : ಉದ್ಯಮಿ ಹಾಗು ಕೊಡುಗೈ ದಾನಿ ಪ್ರಾಂಕಿ ಪಿಂಟೋ ಕಾಶಿಪಟ್ಣ,ನಿವೃತ್ತ ಅಂಚೆ ಇಲಾಖಾ ಸಿಬಂದಿ ಸೇಸಪ್ಪ ನಾಯ್ಕ್, ರಂಗಭೂಮಿ ನಟ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತ ನಿರ್ದೇಶಕರವಿ ಚಂದ್ರ ಗುಂಡೀರಿ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿಗೆ ಕರ್ನಾಟಕ ಸರಕಾರದಿಂದ ನಾಮ ನಿರ್ದೇಶನ ಸದಸ್ಯ ಇಸ್ಮಾಯಿಲ್ ಕೆ ಪೆರಿಂಜೆ ರವರನ್ನು ಶಾಲು ಹೊದಿಸಿ ಗೌರವಿಸಲಾಯಿತು.ಕಾರ್ಯದರ್ಶಿ ಸುಜಿತ್ ಕುಮಾರ್ ವರದಿ ವಾಚಿಸಿದರು.ಶ್ರೀಪತಿ ಉಪಾಧ್ಯಾಯರನ್ನು ಪ್ರಸ್ತಾಪಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಹರಿಪ್ರಸಾದ್ ವಂದಿಸಿದರು.

LEAVE A REPLY

Please enter your comment!
Please enter your name here