ಬಳಂಜ: ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆ

0

ಬಳಂಜ: ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಫೆ.10ರಂದು ಕಾಂಗ್ರೇಸ್ ಕಾರ್ಯಕರ್ತರ ಸಭೆ ನಡೆಯಿತು.

ಸಭೆಯಲ್ಲಿ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಧರ್ಣಪ್ಪ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಗ್ರಾಮ ‌ಸಮಿತಿಗಳ ಅಧ್ಯಕ್ಷರುಗಳಾದ ವಾಸು ಪೂಜಾರಿ, ಜೆರೋಮ್ ಲೋಬೊ, ಶಂಶುದ್ದೀನ್ ಕಟ್ಟೆ, ಸಹಕಾರ ಸಂಘದ ನಿರ್ದೇಶಕರುಗಳಾಗಿ ವಿಜೇತರಾದ ಅಭ್ಯರ್ಥಿಗಳಾದ ದಿನೇಶ್ ಪಿಕೆ, ದೇಜಪ್ಪ ಪೂಜಾರಿ, ದೇವಿಪ್ರಸಾದ್ ಶೆಟ್ಟಿ, ಸ್ಪರ್ದಿಸಿದ್ದ ಅಭ್ಯರ್ಥಿಗಳಾದ ರಮೇಶ್, ವಿಕ್ಟರ್ ಕ್ರಾಸ್ತಾ, ಸತೀಶ್ ದೇವಾಡಿಗ, ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಅಮೀನ್, ಪ್ರಮುಖರಾದ ಪಿಕೆ ಚಂದ್ರಶೇಖರ್, ಪದ್ಮನಾಭ ಸಾಲ್ಯಾನ್, ಸದಾನಂದ ಸಾಲ್ಯಾನ್, ಮತ್ತಿತರ ಪ್ರಮುಖರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಭಿನಂದನಾ ಸಮಾರಂಭದಲ್ಲಿ ಫೆ.17ರಂದು ಜರುಗುವ ಕಾಂಗ್ರೆಸ್ ಸಮಾವೇಶದ ರೂಪುರೇಷೆಯ‌ ಕುರಿತು ಸಮಾಲೋಚಿಸಲಾಯಿತು.ಯುವ ಕಾಂಗ್ರೆಸ್ ಜಿಲ್ಲಾ ವಕ್ತಾರ ಸಂದೀಪ್ ಎಸ್.ನೀರಲ್ಕೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here