ಬೆಳ್ತಂಗಡಿ ಧರ್ಮಪ್ರಾಂತ್ಯ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮ- ಕ್ಯಾಥೋಲಿಕ್ ಚರ್ಚ್ ಸಿರೋ ಮಲಬಾರ್ ಮೇಜರ್ ಆರ್ಚ್ ಬಿಷಪ್ ರಫಾಯೆಲ್ ತಟ್ಟಿಲ್ ರವರ ನೇತೃತ್ವದಲ್ಲಿ ದಿವ್ಯ ಬಲಿ ಪೂಜೆ- ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಯವರ ಧರ್ಮಾಧ್ಯಕ್ಷ ದೀಕ್ಷೆಯ ರಜತ ಸಂಭ್ರಮ

0

ಬೆಳ್ತಂಗಡಿ: ಕರ್ನಾಟಕದ ಪ್ರಥಮ ಸೀರೋ ಮಲಬಾರ್ ಧರ್ಮಪ್ರಾಂತ್ಯವಾದ ಬೆಳ್ತಂಗಡಿ ಧರ್ಮಪ್ರಾಂತ್ಯವು 2024 ಫೆ.11ರಂದು ಸ್ಥಾಪನೆಯ ಮತ್ತು ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ಆಯ್ಕೆಯಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿಯವರ ಧರ್ಮಾಧ್ಯಕ್ಷ ದೀಕ್ಷೆಯ ರಜತ ಮಹೋತ್ಸವ ಕಾರ್ಯಕ್ರಮ ಬೆಳ್ತಂಗಡಿಯಲ್ಲಿ ಉದಯನಗರ ಜೂಬಿಲಿ ಮೈದಾನ ಬಿಷಪ್ಸ್ ಹೌಸ್ ನಲ್ಲಿ ನಡೆಯಿತು.

”ವಂದನೆಗಳೊಂದಿಗೆ ಒಮ್ಮನದಿಂ” ಕೃತಜ್ಞತಾ ಬಲಿಪೂಜಾರ್ಪಣೆ ಕ್ಯಾಥೋಲಿಕ್ ಚರ್ಚ್ ಸಿರೋ ಮಲಬಾರ್ ಮೇಜರ್ ಆರ್ಚ್ ಬಿಷಪ್ ರಫಾಯೆಲ್ ತಟ್ಟಿಲ್ ದಿವ್ಯ ಬಲಿ ಪೂಜೆ ಅರ್ಪಿಸಿದರು. ಕರ್ನಾಟಕ ಹಾಗೂ ಕೇರಳದಿಂದ ಅನೇಕ ಮಹಾಧರ್ಮಾಧ್ಯಕ್ಷರುಗಳು ಮತ್ತು ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಜನರು ಈ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.

ನಂತರ ನಡೆದ ಸಭಾ ಕಾರ್ಯಕ್ರಮದ ಉದ್ಘಾಟಣೆ ಯನ್ನು ಮೇಜರ್ ಆರ್ಚ್ ಬಿಷಪ್ ರಫಾಯೆಲ್ ತಟ್ಟಿಲ್ ನೆರವೇರಿಸಿ ಶುಭ ಹಾರೈಸಿದರು. ತಲಶೇರಿ ಆರ್ಚ್ ಬಿಷಪ್ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು. ಬಿಷಪ್ ಲಾರೆನ್ಸ್ ಮುಕ್ಕುಯಿ, ಸಭಾಪತಿ ಗಳಾದ ಯು. ಟಿ ಖಾದರ್, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಇಂಧನ ಸಚಿವರಾದ ಟಿ. ಜೆ. ಜಾರ್ಜ್, ಶಾಸಕರಾದ ಹರೀಶ್ ಪೂಂಜ, ಅತೀ ವಂದನೀಯ ಬಿಷಪ್ ಪೀಟರ್ ಮಚಾಡೋ, ಬೆಂಗಳೂರಿನ ಆರ್ಚ್ ಬಿಷಪ್,ಅತೀ ವಂದನೀಯ ಬಿಷಪ್ ಜೋಸೆಫ್ ಪಂಪ್ಲಾನಿ, ತಲಸ್ಸೆರಿಯ ಆರ್ಚ್ ಬಿಷಪ್,ಅತೀ. ವಂ.ಪೀಟರ್ ಪೌಲ್ ಸಲ್ಡಾನ್ಹಾ, ಮಂಗಳೂರಿನ ಬಿಷಪ್,ಪರಮಪೂಜ್ಯ ಗೀವರ್ಗೀಸ್ ಮಕಾರಿಯೋಸ್ ಪುತ್ತೂರಿನ ಬಿಷಪ್,ಅತೀ ವಂ. ಬಿಷಪ್ ಮ್ಯಾಥ್ಯೂ ಮೂಲಕಟ್ಟು ಕೊಟ್ಟಾಯಂ ಆರ್ಚ್ ಬಿಷಪ್,ಅತೀ ವಂ. ಬಿಷಪ್ ಬರ್ನಾಡ್ ಮೊರಾಸ್ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್, ಮೈಸೂರು ಡಯಾಸಿಸ್, ಅತೀ ವಂ. ಬಿಷಪ್ ಜಾರ್ಜ್ ವಲಿಯಮಟ್ಟಂ ಆರ್ಚ್ ಬಿಷಪ್ ಎಮೆರಿಟಸ್ ತಲಶ್ಶೇರಿ, ಅತಿ ವಂ.ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ ನಿವೃತ್ತ ಬಿಷಪ್ ಮಂಗಳೂರು, ಅತಿ ವಂ.ಜೆರಾಲ್ಡ್ ಐಸಾಕ್ ಲೋಬೋ, ಉಡುಪಿ ಬಿಷಪ್, ರೆ.ರಾಬರ್ಟ್ ಅತೀ ವಂ. ಬಿಷಪ್ ಎಂ.ಮಿರಾಂಡ, ಗುಲ್ಬರ್ಗಾ ಬಿಷಪ್, ಅತೀ ವಂ. ಬಿಷಪ್ ಜೋಸ್ ಪೊರುನ್ನೆಡೋಮ್, ಮಾನಂತವಾಡಿ ಬಿಷಪ್,ಅತೀ ವಂ. ಜೋಸೆಫ್ ಅರುಮಚದತ್ ಭದ್ರಾವತಿಯ ಬಿಷಪ್, ಅತೀ ವಂ ಬಿಷಪ್ ಸೆಬಾಸ್ಟಿಯನ್ ಅಡಯಂತ್ರತ್ ಮಂಡ್ಯ ಬಿಷಪ್, ಅತಿ ವಂ. ಹೆನ್ರಿ ಡಿಸೋಜ ಬಳ್ಳಾರಿ ಬಿಷಪ್,ಅ. ವಂ. ರೆಮಿಗಿಯೋಸ್ ಇಂಚನಾನಿಯಿಲ್ ತಾಮರಶೇರಿ ಬಿಷಪ್,ಶಿವಮೊಗ್ಗ ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ, ಅತಿ ವಂ. ಡೆರಿಕ್ ಫೆರ್ನಾಂಡಿಸ್ ಬೆಳಗಾವಿ ಬಿಷಪ್, ಕಾರವಾರ ಧರ್ಮಪ್ರಾಂತ್ಯ ಚುನಾಯಿತ ಬಿಷಪ್ ಡುಮಿಂಗ್ ಡಯಾಸ್, ಬಿಷಪ್ ಜೇಕಬ್, ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯ ಬೆಳ್ತಂಗಡಿ, ಪುತ್ತೂರು ಶಾಸಕ ಅಶೋಕ್ ರೈ, ಗಂಗಾಧರ ಗೌಡ ಮಾಜಿ ಸಚಿವರು ಬೆಳ್ತಂಗಡಿ, ಜೆ.ಆರ್.ಲೋಬೊ ಅಧ್ಯಕ್ಷರು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ,ಐವನ್ ಡಿಸೋಜಾ ಮಾಜಿ ಎಂಎಲ್ಸಿ ಮಂಗಳೂರು,ರಮಾನಾಥ ರೈ ಮಾಜಿ ಸಚಿವರು ಬಂಟ್ವಾಳ,ವಿನಯಕುಮಾರ್ ಸೊರಕೆ ಮಾಜಿ ಸಚಿವರು,ರಕ್ಷಿತ್ ಶಿವರಾಂ, ಯು. ಸಿ. ಪೌಲೋಸ್, ಜಾನ್ಸನ್ ಕೆ. ಜೆ., ಲೋಕಾಯುಕ್ತ ಎಸ್. ಪಿ., , ಸೈಮನ್ ಸಿ. ಎ. ಡಿ ಎಫ್ ಓ ಆಂಟೋನಿ ಮರಿಯಪ್ಪ,ಪಿ. ಪಿ. ವರ್ಗೀಸ್, ಮಥಾಯ್, ಜೋಯ್, ರಾಜೇಶ್ ಪುದುಶೇರಿ, ಉಮ್ಮರ್ ಕುಂಞಿ ಮುಸ್ಲಿಯಾರ್, ಕೆ. ಪಿ. ಥಾಮಸ್, ಸೆಬಾಸ್ಟಿಯನ್ ಕೆ. ಕೆ. ನಗರ ಪಂಚಾಯತ್ ಸದಸ್ಯರುಗಳಾದ ಜಗದೀಶ್ ಡಿ., ಜನಾರ್ಧನ ಕುಲಾಲ್,ವ. ಫಾ. ಶಾಜಿ ಮ್ಯಾಥಿವ್, ವ. ಫಾ. ಲಾರೆನ್ಸ್ ಪುಣೊಲಿಲ್, ವ. ಫಾ. ಜೋಬಿ ಪುಲ್ಲಟ್, ಬಿಟ್ಟಿ ನೆಡುನೀಲಮ್, ಸೇವಿಯರ್ ಪಾಲೆಲಿ, ಜೋಯ್ ವೆಟ್ಟಮ್, ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು, ಜನಪ್ರತಿನಿಧಿಗಳು ಹಾಗೂ ಇತರ ಹಲವು ಗಣ್ಯರು ಭಾಗವಹಿಸಿದರು.

ಫಾ. ಜೋಸ್ ವಲಿಯ ಪರಂಬಿಲ್ ಸ್ವಾಗತಿಸಿದರು. ಫಾ. ಜೋಬಿ ಪುಲ್ಲಟ್ ಮತ್ತು ಆನ್ಜೆ ಲ್ ಕಾರ್ಯಕ್ರಮ ನಿರೂಪಿಸಿದರು. ಲಿಲ್ಲಿ ಆಂಟೋನಿ ವಂದಿಸಿದರು. ಸಂತ ಪೋಪ್ ರವರ ಸಂದೇಶ ವನ್ನು ವ ಫಾ ಲಾರೆನ್ಸ್ ಪುಣೊಲಿಲ್ ಓದಿ ಹೇಳಿದರು.

LEAVE A REPLY

Please enter your comment!
Please enter your name here