ಕೊಲ್ಲೆತ್ಯಾರು ಬಂಗೇರ ಕುಟುಂಬಸ್ಥರ ದೈವಗಳ ಪುನರ್‌ಪ್ರತಿಷ್ಠೆ

0

ಪಾಲೇದು: ಇಲ್ಲಿನ ಕೊಲ್ಲೆತ್ಯಾರುವಿನಲ್ಲಿ ನೂತನವಾಗಿ ನಿರ್ಮಿಸಿದ ಬಂಗೇರ ಕುಟುಂಬಸ್ಥರ ಚಾವಡಿಯಲ್ಲಿ ದೈವಗಳ ಪುನ: ಪ್ರತಿಷ್ಠಾಪನೆ ಜ.25ರಂದು ಕೊಲ್ಲೆತ್ಯಾರುವಿನಲ್ಲಿ ನಡೆಯಿತು.ಅಶೋಕ್ ಶಾಂತಿ ವೈದಿಕ ವಿಧಿವಿಧಾನಗಳನ್ನು ನೇರವೆರಿಸಿದರು.ದೈವಗಳಿಗೆ ಕಲಾಶಭಿಷೇಕ ನಡೆದು ನೂತನ ಚಾವಡಿಯಲ್ಲಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.ದೈವಗಳ ಪೂಜಾ ವಿಧಿವಿಧಾನಗಳನ್ನು ಮನೋಜ್ ಕುಮಾರ್ ಕಟ್ಟೆಮಾರ್ ನೇತೃತ್ವದಲ್ಲಿ ನಡೆಯಿತು.ದೈವಗಳಿಗೆ ಪರ್ವ ಸೇವೆ ನಡೆದು ಅನ್ನಸಂತರ್ಪಣೆ ನಡೆಯಿತು.ಸಾಯಂಕಾಲ ದೈವಗಳಿಗೆ ಅಗೇಲು ಸೇವೆಯನ್ನು ದೈವ ಮಧ್ಯಸ್ಥ ವಸಂತ ಬಿ.ಬಂಗೇರ ರವರು ನೇರವೆರಿಸಿದರು.

ದೈವದ ಅನುಗ್ರಹದಿಂದ ಸಾಧ್ಯ:
ಹಲವಾರು ವರ್ಷಗಳಿಂದ ದೈವಗಳಿಗೆ ನೂತನ ಚಾವಡಿ ನಿರ್ಮಿಸಬೇಕೆಂಬ ಅಭಿಲಾಷೆ ನಮ್ಮ ಕುಟುಂಬದ ಸದಸ್ಯರಲ್ಲಿತ್ತು ಇಂದು ದೈವಗಳ ಅನುಗ್ರಹದಿಂದ ಕುಟುಂಬಸ್ಥರಿಗೆ ಸೇವೆ ಮಾಡಲು ಸಾಧ್ಯವಾಗಿದೆ ಎಂದು ಕೊಲ್ಲೆತ್ಯಾರು ಬಂಗೇರ ಕುಟುಂಬಸ್ಥರ ಕೇಶವ ಪೂಜಾರಿ ಹೇಳಿದರು.
ವಿಶ್ವನಾಥ್ ಪೂಜಾರಿ, ಶ್ಯಾಮ್ ಪೂಜಾರಿ, ಲೋಕೇಶ್ ಪೂಜಾರಿ, ನವೀನ್, ಪುರುಷೋತ್ತಮ, ವಿಶ್ವನಾಥ ಪೂಜಾರಿ, ರಂಜಿತ್, ಸುಜಿತ್, ಸುನೀಲ್, ರಾಜೇಶ್, ನಿತೇಶ್, ಯೋಗಿಶ್ ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here