ಸೋಮಂತಡ್ಕದಲ್ಲಿ ಕಾರು ಅಪಘಾತ

0

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕ ಚರ್ಚ್ ತಿರುವಿನ ಬಳಿ ಕಾರು ಅಪಘಾತವಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಕೋಲಾರ ಮೂಲದ 4 ಯುವಕರು ಜಿಲ್ಲೆಯ ಸ್ಥಳಗಳನ್ನು ಸಂದರ್ಶಿಸಿ, ಚಿಕ್ಕಮಗಳೂರು ಮುಳ್ಳಯ್ಯನಗಿರಿಗೆ ತೆರಳುವ ಸಂದರ್ಭದಲ್ಲಿ ಸೋಮಂತಡ್ಕ ಚರ್ಚ್ ತಿರುವಿನ ಬಳಿ ಕಾರು ನಿಯಂತ್ರಣ ತಪ್ಪಿ ಮಣ್ಣಿನ ಧರೆಗೆ ಬಡಿಯಿತು.

ಅನತಿ ದೂರದಲ್ಲಿ ವಿದ್ಯುತ್ ಕಂಬವಿದ್ದು ದೊಡ್ಡ ಅನಾಹುತ ತಪ್ಪಿತು.ಇಬ್ಬರು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಮಂಜು (23), ಅವಿನಾಶ್ (22) ಅವರನ್ನು ಪಂಚಾಯತ್ ಸದಸ್ಯ ಜಗದೀಶ ನಾಯ್ಕ ಹಾಗೂ ಸಚಿನ್ ಭಿಡೆ ಮುಂಡಾಜೆ ಉಜಿರೆ ಖಾಸಗಿ ಆಸ್ಪತ್ರೆಗೆ ಜೀಪಿನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಮಂಜು ಎಂಬವರಿಗೆ ತಲೆಗೆ ತೀವ್ರ ಗಾಯಳಾಗಿದ್ದು ಹೊಲಿಗೆ ಹಾಕಲಾಗಿದ್ದು, ಅವಿನಾಶ್ ಎಂಬವರಿಗೆ ಗಾಯವಾಗಿ ಪ್ರಥಮ ಚಿಕಿತ್ಸೆ ಕೊಡಲಾಯಿತು.

LEAVE A REPLY

Please enter your comment!
Please enter your name here