ಪೆರ್ಲ ಒಕ್ಕೂಟದ ತ್ರೈಮಾಸಿಕ ಸಭೆ

0

ಪೆರ್ಲ: ಪೆರ್ಲ ಒಕ್ಕೂಟದ ತ್ರೈಮಾಸಿಕ ಸಭೆಯು ರಾಜೀವ ಗಾಂಧೀ ಸೇವಾ ಕೇಂದ್ರದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ವನಿತಾ ವಿ.ಶೆಟ್ಟಿಗಾರ್ ವಹಿಸಿಕೊಂಡಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ತಾಲೂಕು ಆಂತರಿಕ ಲೆಕ್ಕಪರಿಶೋಧಕರಾದ ಶಿವರಾಮ್ ಮಾತನಾಡಿ ಯೋಜನೆಯ ನಿಯಮಾವಳಿಗಳನ್ನು ಮತ್ತು ಸಾಲ ವಿತರಣೆ, ಸಾಲ ವಿನಿಯೋಗ, ಸಾಲ ಮರುಪಾವತಿ ಚೀಟಿ ಮತ್ತು ತಂಡದಲ್ಲಿ ಎಸ್.ಬಿ.ಐ ಖಾತೆ ಇರುವ ಬಗ್ಗೆ ತಿಳಿಸಿದರು.

ನೂತನ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.ಅಧ್ಯಕ್ಷರಾಗಿ ಅಣ್ಣು ಗೌಡ, ಉಪಾಧ್ಯಕ್ಷರಾಗಿ ಸೀತಾ, ಕಾರ್ಯದರ್ಶಿಯಾಗಿ ಸಂತೋಷ್ ಕೃಷ್ಣ, ಜೊತೆ ಕಾರ್ಯದರ್ಶಿಯಾಗಿ ಯಮುನಾ, ಕೋಶಾಧಿಕಾರಿಗಳಾಗಿ ಉಷಾ ಇವರನ್ನು ಆಯ್ಕೆ ಮಾಡಲಾಯಿತು.ಹಾಗು

ಅರಸಿನಮಕ್ಕಿ ವಲಯದ ಮೇಲ್ವಿಚಾರಕರಾದ ಶಶಿಕಲಾ, ವಿ.ಎಲ್.ಇ ದಿವ್ಯ, ಸೇವಾಪ್ರತಿನಿಧಿಯಾದ ಅರುಣಾ ಗಣೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here