ಕಲ್ಮಂಜ: ಕಾಡಾನೆಗಳ ಕಾಟ

0

ಕಲ್ಮಂಜ ಗ್ರಾಮದ ಆನಂಗಳ್ಳಿ ಸಮೀಪದ ಬೆರ್ಕೆ ಎಂಬಲ್ಲಿ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ನಾಶ ಉಂಟು ಮಾಡಿವೆ.

ಡಿ.16 ತಡರಾತ್ರಿ ಇಲ್ಲಿನ ಎಂ.ಎಸ್.ಪ್ರಕಾಶ್ ಭಟ್ ಎಂಬವರ ತೋಟಕ್ಕೆ ಪ್ರವೇಶಿಸಿದ ಕಾಡಾನೆಗಳು 50ಕ್ಕಿಂತ ಅಧಿಕ ಬಾಳೆಗಿಡ ಹಾಗೂ ಅಡಕೆ ಗಿಡಗಳಿಗೆ ಹಾನಿ ಉಂಟು ಮಾಡಿವೆ.ಕಳೆದ ತಿಂಗಳು ಇವರ ಸಮೀಪದ ಪ್ರಶಾಂತ ಕಾಕತ್ಕರ್ ಅವರ ತೋಟಕ್ಕೆ ನುಗ್ಗಿದ್ದ ಕಾಡಾನೆಗಳು ಕೃಷಿ ಹಾನಿ ಉಂಟುಮಾಡಿದ್ದವು.ಒಂದು ಸಣ್ಣ ಆನೆ ಸಹಿತ ಎರಡು ಆನೆಗಳು ತೋಟವನ್ನು ಪ್ರವೇಶಿಸಿದ್ದು ಶುಕ್ರವಾರ ರಾತ್ರಿ ಚಿಬಿದ್ರೆ ಗ್ರಾಮದಲ್ಲಿ ಕಂಡುಬಂದಿದ್ದ ಕಾಡಾನೆಗಳು ಕಲ್ಮಂಜದ ಕಡೆ ಬಂದಿರುವ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here