ಗಮಕ ಕಲಾ ಪರಿಷತ್ ರಾಜ್ಯಾಧ್ಯಕ್ಷರಿಗೆ ಜಿಲ್ಲಾಧ್ಯಕ್ಷರಿಂದ ಗೌರವ ಸಮರ್ಪಣೆ

0

ಉಜಿರೆ: ಗಮಕ ಕಲಾ ಪರಿಷತ್  ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ  ಪ್ರಖ್ಯಾತ ಗಮಕಿ,  ವಿದ್ವಾಂಸ  ಡಾ.ಎ ವಿ.ಪ್ರಸನ್ನ ಅವರು ಡಿ.12ರಂದು  ಶ್ರೀ ಕ್ಷೇತ್ರ ಧರ್ಮಸ್ಥಳದ  ಲಕ್ಷದೀಪೋತ್ಸವದ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನದ ಅಧ್ಯಕ್ಷತೆ ವಹಿಸಲು ಆಗಮಿಸಿದ ಸಂದರ್ಭದಲ್ಲಿ  ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಗಮಕ ಕಲಾ ಪರಿಷತ್ ಮತ್ತು  ಬೆಳ್ತಂಗಡಿ  ತಾಲೂಕು ಗಮಕ ಕಲಾ ಪರಿಷತ್ ವತಿಯಿಂದ  ಗೌರವಿಸಲಾಯಿತು.

ಅವರು ರಾಜ್ಯ ಗಮಕ ಕಲಾ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗಮಕ ಕಲಾ ಪರಿಷತ್ ಅಧ್ಯಕ್ಷ  ಪ್ರೊ.ಮಧೂರು ಮೋಹನ ಕಲ್ಲೂರಾಯರು ತಮ್ಮ ಗೇರುಕಟ್ಟೆ ನಿವಾಸದಲ್ಲಿ  ಡಾ.ಎ ವಿ.ಪ್ರಸನ್ನ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.

ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ನೂತನ ಅಧ್ಯಕ್ಷ  ರಾಮಕೃಷ್ಣ ಭಟ್ ಉಜಿರೆ ಅವರು  ರಾಜ್ಯಾಧ್ಯಕ್ಷ ಎ ವಿ.ಪ್ರಸನ್ನ ಅವರಿಗೆ ಶಾಲು ಹೊದಿಸಿ, ಹಾರಾರ್ಪಣೆಗೈದು  ಫಲಪುಷ್ಪಗಳೊಂದಿಗೆ  ಗೌರವಿಸಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ತಾಲೂಕು ಗಮಕ ಕಲಾ ಪರಿಷತ್ ಉಪಾಧ್ಯಕ್ಷರಾದ ರಾಮಕೃಷ್ಣ ಭಟ್ ಬೆಳಾಲು, ರಮೇಶ್ ಮಯ್ಯ, ಕೋಶಾಧಿಕಾರಿ ಸುವರ್ಣಕುಮಾರಿ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here