ಆರಂಬೋಡಿ ಕಾಂಗ್ರೆಸ್ ಮುಖಂಡರಿಂದ ಸತೀಶ್ ಕೆ.ಕಾಶಿಪಟ್ಣ ಅವರಿಗೆ ಗೌರವಾರ್ಪಣೆ

0

ಕಾಶಿಪಟ್ಣ: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರದ ನೂತನ ಅಧ್ಯಕ್ಷರಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಂದ ನೇಮಕಗೊಂಡಿರುವ ಸತೀಶ್ ಕೆ.ಕಾಶಿಪಟ್ಣ ಅವರನ್ನು ಆರಂಬೋಡಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ನಿಯೋಗದಲ್ಲಿ ಆರಂಬೋಡಿ ಗ್ರಾ.ಪಂ.ಸದಸ್ಯರಾದ ಸುದರ್ಶನ ಶೆಟ್ಟಿ ಹಕ್ಕೇರಿ, ರಮೇಶ್ ಮಂಜಿಲ, ಉಮೇಶ್ ಹಿಂಗಾಣಿ, ನವೀನ್ ಮಂಜಿಲ, ಸುದರ್ಶನ್ ಮಂಜಿಲ, ರಾಕೇಶ್ ಶೆಟ್ಟಿ ತಿರುಮಲಕಾಡು, ಅಲ್ತಾಫ್, ಹೊನ್ನಯ ಶೆಟ್ಟಿಗಾರ್, ರಮೇಶ್ ನಿಡ್ಯಲ, ಪುಷ್ಪರಾಜ ಶೆಟ್ಟಿ ಕೋಡ್ಯೆಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here