ಧರ್ಮಸ್ಥಳಕ್ಕೆ ಆಗಮಿಸಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

0

ಬೆಳ್ತಂಗಡಿ: ಜೂ.4 ರಂದು ಮುಂಜಾನೆ ವೇಳೆ ಬೆಂಗಳೂರಿನ ನಿವಾಸಿ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.ಬೆಂಗಳೂರಿನ ವಿನಯ್.ಬಿ (27) ಎಂಬ ಯುವಕ ಹಾಗೂ ಇಬ್ಬರು ಸಹಪಾಠಿಗಳೊಂದಿಗೆ ರಜೆ ಇದ್ದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾರಿನಲ್ಲಿ ಆಗಮಿಸುತ್ತಿದ್ದರು.

ಮುಂಜಾನೆ ವೇಳೆ ಕ್ಷೇತ್ರ ತಲುಪುತಿದ್ದಂತೆ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡಿದ್ದ ಯುವಕನಿಗೆ ಜೋರಾಗಿ ಎದೆನೋವು ಸಂಭವಿಸಿದೆ. ತಕ್ಷಣ ಹತ್ತಿರದ ಉಜಿರೆಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಆದರೆ, ಅಷ್ಟರ ವೇಳೆಯಲ್ಲಿ ಯುವಕ ಕೊನೆಯುಸಿರೆಳೆದಿದ್ದಾರೆ.ನಂತರ ಮೃತ ದೇಹವನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here