ಕಳೆಂಜ: ಜೆಸಿಐ ಕೊಕ್ಕಡ ಸಂಸ್ಥೆ ವತಿಯಿಂದ ಕು. ಹರ್ಷಿತಾ ಅವರಿಗೆ ಅಭಿನಂದನಾ ಸಮಾರಂಭ

0

ಕಳೆಂಜ: ಇಲ್ಲಿಯ ನೂಜಿಲ ಮನೆ ಸತೀಶ್ ಗೌಡ ಹಾಗೂ ಗೀತಾ ದಂಪತಿಯ ಪುತ್ರಿ ಕು. ಹರ್ಷಿತಾ ಅವರು ವಾಣಿಜ್ಯ ವಿಭಾಗದಲ್ಲಿ 589 ಅಂಕಗಳನ್ನು ಪಡೆದು ಗ್ರಾಮಕ್ಕೆ ಕೀರ್ತಿಯನ್ನು ತಂದಿರುತ್ತಾರೆ.

ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ವತಿಯಿಂದ ಎ.21 ರಂದು ಕಳೆಂಜ ಗ್ರಾಮದ ನೂಜಿಲ ಮನೆಯಲ್ಲಿ ಜರುಗಿದ ಸನ್ಮಾನ ಕಾರ್ಯಕ್ರಮದಲ್ಲಿ ಘಟಕಾಧ್ಯ ಜಿತೇಶ್ ಎಲ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.

ಕೌಕ್ರಾಡಿ ಸಂತ ಜಾನರ ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜೆಸಿಂತಾ ಡಿ ಸೋಜ ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಶಾಲು ಹೊದಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಅತ್ತ್ಯುತ್ತಮ ಶೈಕ್ಷಣಿಕ ಸಾಧನೆಯಿಂದ ಗ್ರಾಮಕ್ಕೆ ಕೀರ್ತಿ ತಂದ ಸಾಧನೆಗಾಗಿ ಶುಭಾಶಯಗಳನ್ನು ಸಲ್ಲಿಸಿದರು. ಹಿರಿಯ ಸದಸ್ಯ ಜೋಸೆಫ್ ಪಿರೇರಾ ಅವರು ಜೇಸಿ ವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ್ ರಾವ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಶ್ರೀಮತಿ ಗೀತಾ, ಶ್ರೀ ಸತೀಶ್ ಗೌಡ, ಗ್ರಹಿತ್, ಮಾಯಿಲಪ್ಪ ಗೌಡ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here