ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು: ವಾರ್ಷಿಕ ಉತ್ಸವ ಹಾಗೂ ವಾರ್ಷಿಕ ಪ್ರತಿಷ್ಠಾ ವರ್ದಾಂತ್ಯೋತ್ಸವದ ಆಮಂತ್ರಣ ಬಿಡುಗಡೆ

0

ಬೆಳ್ತಂಗಡಿ: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರುನಲ್ಲಿ ಮೇ.8 ಕ್ಕೆ ನಡೆಯಲಿರುವ ಕಾರ್ಕಳ, ಮೂಡಬಿದ್ರೆ, ಬೆಳ್ತಂಗಡಿ, ಪುತ್ತೂರು ವಲಯದ ವಾರ್ಷಿಕ ಉತ್ಸವ ಮತ್ತು ವಾರ್ಷಿಕ ಪ್ರತಿಷ್ಠಾ ವರ್ದಾಂತ್ಯೋತ್ಸವದ ಆಮಂತ್ರಣವನ್ನು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಬಾರ್ಕೂರು ಇಲ್ಲಿಯ ಪ್ರದಾನ ಕಾರ್ಯದರ್ಶಿ ಶ್ರೀಧರ ಭಂಡಾರಿ ಬಿರ್ತಿ ಇವರು ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜದ ಸಂಘದ ವಾರ್ಷಿಕೋತ್ಸವ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭಂಡಾರಿ ಸಮಾಜ ಸಂಘ ಇದರ ಅಧ್ಯಕ್ಷರಾದ ಉಮೇಶ್ ಭಂಡಾರಿ ಉಜಿರೆ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ವಾರ್ಷಿಕೋತ್ಸವ 2023 ಇದರ ಅಧ್ಯಕ್ಷ ಸತೀಶ್ ಭಂಡಾರಿ ಕರಿಂಜೆ, ಭಂಡಾರಿ ಯುವ ವೇದಿಕೆ ಅಧ್ಯಕ್ಷ ವಿಶ್ವನಾಥ ಭಂಡಾರಿ ಉಜಿರೆ, ಸವಿತಾ ಸಮಾಜದ ಅಧ್ಯಕ್ಷರು ಗೋಪಾಲ ಭಂಡಾರಿ, ಶಶಿಧರ್ ಭಂಡಾರಿ ಕಾರ್ಕಳ, ಗೋಪಾಲ ಭಂಡಾರಿ ಕಾರ್ಕಳ, ಹಾಗೂ ಉತ್ಸವದ ಪ್ರದಾನ ಕಾರ್ಯದರ್ಶಿ ಅಶೋಕ್ ಭಂಡಾರಿ ಗುಂಡಿಯಾಲ್ಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here