ಗಂಡಿಬಾಗಿಲು ಕೆ ಎಸ್ ಎಂ ಸಿ ಎ ಮಹಿಳಾ ಘಟಕದಿಂದ ಮಹಿಳೆಯರಿಗೆ ವಸ್ತ್ರ ವಿತರಣೆ ಮತ್ತು ಸ್ವ ಉದ್ಯೋಗ ಕೇಂದ್ರ ಸಂದರ್ಶನ

0

ನೆರಿಯ :ಗಂಡಿಬಾಗಿಲಿನ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಶೋಸಿಯೇಷನ್ ಮಹಿಳಾ ಘಟಕದ (ಮಾತೃ ವೇದಿ ) ವತಿಯಿಂದ ಫೆ. 12 ರಂದು ನೆರಿಯದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಗುಡಿ ಕೈಗಾರಿಕೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಬೊಮ್ಮಣ್ಣ ರವರು ಹಾಳೆ ತಟ್ಟೆಯ ತಯಾರಿಕ ಘಟಕದ ಪರಿಚಯವನ್ನು ಮಾಡಿಕೊಟ್ಟರು.
ಈ ವೇಳೆ ಸೇರಿದ ಮಹಿಳೆಯರು ಮತ್ತು ಮಕ್ಕಳಿಗೆ ವಸ್ತ್ರಗಳನ್ನು ಕೆ ಎಸ್ ಎಂ ಸಿ ಎ ಮಹಿಳಾ ಘಟಕದಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಶೈಬಿ ಮನೋಜ್, ಶ್ರೀಮತಿ ಶೈಜಿ ಸಾಬು, ಶ್ರೀಮತಿ ಉಷಾ ಮೋನುಟ್ಟನ್, ಉಪಾಧ್ಯಕ್ಷೆ ಶ್ರೀಮತಿ ಜೆಮಿನಿ ಶಾಜಿ, ಸಿಲ್ವಿ ಸಿಬಿ, ವಂ, ಸಿ| ಡಿವಿನಾ, ಶ್ರೀಮತಿ ರೂಬಿ ವರ್ಗಿಸ್, ಕೆ ಎಸ್ ಎಂಸಿ ಎ ಅಧ್ಯಕ್ಷ ಬೇಬಿ ವಿ ಟಿ, ಕೇಂದ್ರ ಸಮಿತಿ ಯ ಪ್ರದಾನ ಕಾರ್ಯದರ್ಶಿ ಸೇಬಾಸ್ಟಿನ್ ಎಂ ಜೆ, ದೇವಗಿರಿ ಚರ್ಚ್ ನ ವಂ. ಫಾ. ಸಿರಿಲ್, ಕೆ ಎಸ್ ಎಂ ಸಿ ಎ ನಿರ್ದೇಶಕರು ಗಂಡಿಬಾಗಿಲು ಚರ್ಚ್ ನ ಧರ್ಮ ಗುರುಗಳು ವಂ ಫಾ| ಶಾಜಿ ಮಾತ್ಯು, ಸಮಾಜ ಸೇವಕ ಪಿ ಪಿ ಜೋಸೆಫ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here