ಪತ್ರಕರ್ತ ನವೀನ್ ಸೂರಿಂಜೆ ರವರ ‘ಕುತ್ಲೂರು ಕಥನ’ ಪುಸ್ತಕ ಬಿಡುಗಡೆ

0

ಕುತ್ಲೂರು: ಪತ್ರಕರ್ತ ನವೀನ್ ಸೂರಿಂಜೆ ಬರೆದ ‘ಕುತ್ಲೂರು ಕಥನ’ ಪುಸ್ತಕವನ್ನು ಖ್ಯಾತ ಜನಪರ ಚಿಂತಕ ದೆಹಲಿಯ ಹರ್ಷ ಮಂದರ್ ರವರು ಜ.26ರಂದು ಮಂಗಳೂರಿನ ಶಾಂತಿಕಿರಣದಲ್ಲಿ ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಡಿವೈಎಫ್ ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ, ಪತ್ರಕರ್ತ ವಿಠಲ ಮಲೆಕುಡಿಯ, ಅಹರ್ನಿಶಿ ಪ್ರಕಾಶನದ ಅಕ್ಷತಾ ಕೆ., ದಲಿತ ಸಂಘಟನೆಯ ಮುಖಂಡ ದೇವದಾಸ್, ಸಂವರ್ಥ ಸಾಹಿಲ್ ವೇದಿಕೆಯಲ್ಲಿದ್ದರು.

ಉಪನ್ಯಾಸಕ ಜೀವನ್ ಕಾರ್ಯಕ್ರಮ ನಿರೂಪಿಸಿದರು. ಕುತ್ಲೂರು ಸಹಿತ ವಿವಿಧ ಭಾಗದ ಮಲೆಕುಡಿಯ ನಿವಾಸಿಗಳು, ಹೋರಾಟಗಾರರು, ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here