ತೆಂಕಕಾರಂದೂರು: ಕಟೀಲು ಅಸ್ರಣ್ಣರು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ

0

ತೆಂಕಕಾರಂದೂರು: ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಕ್ಷೇತ್ರಕ್ಕೆ ಕಟೀಲು ಕ್ಷೇತ್ರದ ಅಸ್ರಣ್ಣರು ಭೇಟಿ ನೀಡಿ ಆಶೀರ್ವಚನ ನೀಡಿದರು

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಸರ ವಿಷ್ಣು ಸಂಪಿಗೆತ್ತಾಯ, ಶ್ರೀ ದೇವಿ ಮಹಾತ್ಮೆ ಯಕ್ಷಗಾನದ ಸೇವಾಕರ್ತರಾದ ಡಾ. ಸದಾನಂದ ಪೂಜಾರಿ ಮತ್ತು ಡಾ.ಸೌಮ್ಯ ಸದಾನಂದ ಪೂಜಾರಿ, ಜಾತ್ರಾ ಸಮಿತಿ ಅಧ್ಯಕ್ಷ ಜಗದೀಶ್ ಕಜೆಬೆಟ್ಟು, ಕಾರ್ಯದರ್ಶಿ ವಿದ್ಯಾನಂದ ಅಂಗಡಿಬೆಟ್ಟು, ಮರೋಡಿ ಎಂ.ಎಸ್ ರಾಜು ಪೂಜಾರಿ- ಸುಫಲಾ, ಜಾತ್ರಾ ಸಮಿತಿ ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ ಮಾರುತಿ ನಿಲಯ, ರಾಜೀವ ಸಾಲಿಯಾನ್ ಮುಂಡೂರು, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಶ್ರೀನಿವಾಸ್ ರೈ ಕಾರಂದೂರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here