




ಮುಂಡಾಜೆ: ಮಂಜುಶ್ರೀ ನಗರದಲ್ಲಿ ದಿ. ಮಹಾಬಲ ರೈ ಕಲ್ಲ ಹಿತ್ತಿಲು ಅವರ ಸ್ಮರಣಾರ್ಥ ಬಸ್ಸು ತಂಗುದಾಣ ಲೋಕಾರ್ಪಣೆ ಸಮಾರಂಭ ನ. 25ರಂದು ಬೆಳಿಗ್ಗೆ 10.30 ಕ್ಕೆ ಜಯಪ್ರಕಾಶ್ ರೈ ಕಲ್ಲ ಹಿತ್ತಿಲು
ಅವರು ದೀಪ ಪ್ರಜ್ವಲಿಸಿ, ನಿವೃತ್ತ ಅಧಿಕಾರಿ ಎಂ. ಎಸ್. ವರ್ಮ ಪರಮುಖ ಉದ್ಘಾಟನೆ ನೆರವೇರಿಸಿದರು.


ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ, ಪರಮುಖ ಪ್ರಗತಿಪರ ಕೃಷಿಕ ಅನಂತ್ ಭಟ್ ಮಚ್ಚಿ ಮಲೆ, ಶಾರದನಗರ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಹೊಳ್ಳ ಕಾನರ್ಪ, ಮುಂಡಾಜೆ ಗ್ರಾಮ ಪಂಚಾಯತ್ ಸದಸ್ಯ ರಾಮಣ್ಣ ಶೆಟ್ಟಿ ಅಗರಿ ಹಾಗೂ ವಿಮಲಾ ಶೇಖರ ಗೌಡ ಉಪಸ್ಥಿತರಿದ್ದರು.









