ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಿಂದ ಸದಸ್ಯರಿಗೆ ತರಬೇತಿ ಕಾರ್ಯಾಗಾರ.

0

ಬೆಳ್ತಂಗಡಿ : ಜೆಸಿ ಭವನದಲ್ಲಿ ಜೆಸಿ ಸದಸ್ಯರಿಗೆ ಸಮಯ ಪಾಲನೆ ಮತ್ತು ಸಾಮಾಜಿಕ ಜಾಲತಾಣ ಎಂಬ ವಿಷಯಗಳ ಕುರಿತು ತರಬೇತಿ ಕಾರ್ಯಗಾರವನ್ನು ಜ.16 ರಂದು ಹಮ್ಮಿಕೊಳ್ಳಲಾಯಿತು.
ಪ್ರೊವಿಷನಲ್ ವಲಯ ತರಬೇತುದಾರರುಗಳಾದ ಜೆಸಿ ಕಾರ್ತಿಕ್ ಶಾಸ್ತ್ರೀ ಮತ್ತು ದೀಪಕ್ ರಾಜ್ ನಡೆಸಿ ಕೊಟ್ಟರು.

ಈ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಜೆಸಿ ಶಂಕರ್ ರಾವ್ ವಹಿಸಿದ್ದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಪ್ರಸಾದ್ ಬಿ. ಎಸ್, ಜೊತೆ ಕಾರ್ಯದರ್ಶಿಗಳಾದ ಜೆಸಿ ಸೃಜನ್ ರ್ ರೈ ಮತ್ತು ಜೂನಿಯರ್ ಜೆಸಿ ಅಧ್ಯಕ್ಷರಾದ ರಾಮಕೃಷ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಜೆಸಿ ರಕ್ಷಿತ್ ಅಂಡಿಂಜೆ ನೆರವೇರಿಸಿದರು, ಜೆಸಿ ವಾಣಿಯನ್ನು ಜೆಸಿ ಅರಿಹಂತ್ ಜೈನ್ ವಾಚಿಸಿದರು, ಜೆಸಿ ಸಚಿನ್ ಮತ್ತು ಜೆಸಿ ಸುಶಾಂತ್ ತರಬೇತುದಾರರನ್ನು ಪರಿಚಯಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಘಟಕದ ಪೂರ್ವಧ್ಯಕ್ಷರು,
ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here