ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತರಬೇತಿ ಕಾರ್ಯಕ್ರಮ

0

ಬೆಳ್ತಂಗಡಿ :ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ಕಾರ್ಯಕ್ರಮಗಳ ನಿರ್ವಹಣೆಗಳ ಬಗ್ಗೆ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತರಬೇತಿ ಕಾರ್ಯಾಗಾರ ಜ.7ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಸುಬ್ರಮಣ್ಯ.ಕೆ ಮುಖ್ಯ ಅಥಿತಿಯಾಗಿ ಪಾಲ್ಗೊಂಡರು. ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಹಾಗೂ ಪ್ರಾವಿಷನಲ್ ವಲಯ ತರಬೇತುದಾರ ಜೆಸಿ ಶಂಕರ್ ರಾವ್ ಮತ್ತು ಘಟಕದ ಕಾರ್ಯದರ್ಶಿ ಪ್ರಾವಿಷನಲ್ ವಲಯ ತರಬೇತುದಾರ ಜೆಸಿ ಸುಧೀರ್ ಕೆ. ಎನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಯೋಜನಾಧಿಕಾರಿಗಳಾದ ಪ್ರೋ. ಗಂಗಾಧರ್, ಡಾ. ಸುಮನ್ ಎನ್. ಶೆಟ್ಟಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಜೆ.ಎಫ್.ಎಮ್ ಪ್ರಸಾದ್ ಬಿ. ಎಸ್ , ಘಟಕದ ಪೂರ್ವಧ್ಯಕ್ಷ ಜೆ.ಎಫ್.ಎಮ್ ನಾರಾಯಣ ಶೆಟ್ಟಿ, ಉಪಾಧ್ಯಕ್ಷರುಗಳಾದ ಜೆ.ಎಫ್.ಎಮ್ ಹೇಮಾವತಿ, ಜೆಸಿ ಹೆಚ್.ಜಿ.ಎಫ್ ಪ್ರೀತಮ್ ಶೆಟ್ಟಿ, ಸದಸ್ಯ ಅನುದೀಪ್ ಉಪಸ್ಥಿತರಿದ್ದರು.

ಪೂರ್ವಧ್ಯಕ್ಷರಾದ ಜೆ.ಎಫ್.ಎಮ್ ಚಿದಾನಂದ ಇಡ್ಯಾ ವೇದಿಕೆಗೆ ಗೌರವಾನ್ವಿತರನ್ನು ಬರಮಾಡಿಕೊಂಡರು, ಸದಸ್ಯ ಜೆಸಿ ಶೈಲೇಶ್ ಜೆಸಿ ವಾಣಿ ವಾಚಿಸಿದರು, ಕಾರ್ಯದರ್ಶಿ ಸುಧೀರ್ ಕೆ. ಎನ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here