ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕೂಪನ್ ಬಿಡುಗಡೆ

0

ಓಡಿಳ್ನಾಳ: ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ರಾಮ ನಗರ ಮೈರಲ್ಕೆ ಓಡಿಲ್ನಾಳ ಇದರ ಬ್ರಹ್ಮಕಲಶೋತ್ಸವದ ಅಂಗವಾಗಿ ಸುವರ್ಣ ದ್ರವ್ಯಕಲಶ,  ಸುವರ್ಣ ಕಲಶ, ರಜತ ದ್ರವ್ಯ ಕಲಶ, ರಜತ ಕಲಶ,ಲಕ್ಷ್ಮಿಕಲಶ, ದುರ್ಗಾ ಕಲಶ, .ತಾಮ್ರ ಕಲಶ, ಇದರ ಕಲಶ ಕೂಪನ್ ಬಿಡುಗಡೆ ಕಾರ್ಯಕ್ರಮ ಡಿ. 4ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.

ಅತಿಥಿಗಳಾದ ರತ್ನಾರಾಜ್ ಜೈನ್ ಕೊಯ್ಯೂರು, ಪಿಲಿಚಾಮುಂಡಿ ಕಲ್ಲು ಕೆನರಾ ಸ್ಟೀಲ್ ಮಾಲಿಕರು ವಿನಯ ಚಂದ್ರ, ಶೇಖರ್ ನಾಯ್ಕ ಗೇರುಕಟ್ಟೆ, ಪ್ರವೀಣ್ ಕುಮಾರ್ ಎಚ್. ಎಸ್ ಬಳೆಂಜ, ರಂಜಿತ್ ಶೆಟ್ಟಿ ಮದ್ದಡ್ಕ ,ಡೀಕಮ್ಮ ಅಶ್ವತ್ ನಗರ, ಕುಸುಮಾ ಕಲ್ಲೊಟ್ಟು, ವಾಮನ ಮೂಲ್ಯ ಮಡಂತಿಲ ಇವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಜೈನ್ ಕುವೆಟ್ಟು, ಕೋಶಾಧಿಕಾರಿ ಮನೋಹರ್ ಪಿಸಿ ಪರಾರಿ, ಜೀರ್ಣೋಧ್ಧಾರ ಸಮಿತಿ ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೊರ್ರ್ಯಾರು, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ನ ಅಧ್ಯಕ್ಷ ವೃಷಭ ಆರಿಗ ಗುತ್ತು, ಪವಿತ್ರ ಪಾಣಿ ಮೋಹನ್ ಕೆರ್ಮುಣ್ಣಾಯ ಮೈರಾರು, ಎಸ್ ಗಂಗಾಧರ ರಾವ್  ಕೆವುಡೇಲು, ಕಲಶ ಸಮಿತಿ ಸಂಚಾಲಕ ಸಮ್ಮತಿ ಜೈನ್ ಕಲ್ಲೋಟ್ಟು, ಹಸಿರು ಹೊರೆಕಾಣಿಕೆ ಸಮಿತಿ ಸಂಚಾಲಕ ಭುವನೇಶ್ ಗೇರುಕಟ್ಟೆ, ಯುವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ ಹಾಗೂ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳ ಸಂಚಾಲಕರು ಸಹ ಸಂಚಾಲಕರು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here