ಹೊಸಂಗಡಿಯಲ್ಲಿ ವೇವ್ಸ್ ಕಾರ್ ವಾಷ್ ಡೇಟೈಲಿಂಗ್ ಶುಭಾರಂಭ

0

ಹೊಸಂಗಡಿ: ಹೊಸಂಗಡಿ ಸೀತಾ ಕಾಂಪ್ಲೆಕ್ಸ್ ನ ಹತ್ತಿರ ಅನುರಾಗ್ ಎಸ್.ಪಿ.ಮಾಲಕತ್ವದ ವೇವ್ಸ್ ಸರ್ವಿಸ್ ಸ್ಟೇಷನ್ ಜೂ.20ರಂದು ಶುಭಾರಂಭಗೊಂಡಿತು. ಉದ್ಯಮಿ ವಿಕಾಸ್ ಜೈನ್ ಪಡ್ಯಾರಬೆಟ್ಟು ಉದ್ಘಾಟಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಹೊಸಂಗಡಿ ಗ್ರಾ.ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಮುಖ್ಯ ಅಥಿತಿಯಾಗಿ ಆಗಮಿಸಿ ಶುಭಹಾರೈಸಿದರು.

ಬೆಳ್ತಂಗಡಿ ಗುರುದೇವ ಕಾಲೇಜಿನ ವಿಶ್ರಾಂತ ಪ್ರಿನ್ಸಿಪಾಲ್ ಕೃಷ್ಣಪ್ಪ ಪೂಜಾರಿ, ಪಂಚಾಯತ್ ಸದಸ್ಯರಾದ ಹರಿಪ್ರಸಾದ್, ಅಬ್ದುಲ್ ರಹಿಮಾನ್ ಪೆರಿಂಜೆ, ಗ್ರಾ.ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಸತೀಶ್ ಮಿತ್ತಮಾರ್, ಉಷಾ ಶರತ್, ದೇಜಪ್ಪ ಶೆಟ್ಟಿ , ಪ್ರಮುಖರುಗಳಾದ ವಿಶ್ವಾಸ್ ಜೈನ್, ವಿಶಾಲ್ ಕೀರ್ತಿ ರೈ, ಸಂತೋಷ್, ಸತ್ಯೇಂದ್ರ ರಾವ್, ಶಶಿಧರ್ ಶೆಟ್ಟಿ ಮೂಡುಕೋಡಿ, ವಿದ್ಯಾನಂದ ಕುಮಾರ್, ಮಾರೂರು ಶಂಭು ಶೆಟ್ಟಿ, ತಾಲೂಕು ಭೂ ನ್ಯಾಯಮಂಡಳಿ ಸದಸ್ಯ ಇಸ್ಮಾಯಿಲ್ ಕೆ. ಪೆರಿಂಜೆ , ಡಾ.ವರದರಾಜ್ ಉಪ್ಪಿನಂಗಡಿ, ಸರಸ್ವತಿ ಶೆಟ್ಟಿ ಮೂಡಬಿದ್ರಿ, ಪದ್ಮರಾಜ್ ಪೇರಿ, ಅಲಿಯಬ್ಬ ಪುಲಬೆ, ಖಾಲಿದ್ ಪುಲಬೆ, ಹರೀಶ್ ಪೊಕ್ಕಿ, ಕಾವ್ಯ ಅನುರಾಗ್ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದ್ದರು.ಮಾಲಕ ಅನುರಾಗ್ ಎಸ್. ಪಿ. ವಂದಿಸಿದರು.

LEAVE A REPLY

Please enter your comment!
Please enter your name here