



ಬೆಳ್ತಂಗಡಿ: ತಾಲೂಕಿನ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಫೆ. 28ರಿಂದ ಮಾ.9ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ವಿಜ್ಞಾಪನ ಪತ್ರವನ್ನು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಬಿಡುಗಡೆಗೊಳಿಸಿದರು.



ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ ಬಾಂದೊಟ್ಟು, ದೇವಸ್ಥಾನದ ಪ್ರಧಾನ ಅರ್ಚಕ ವಿ. ಕೃಷ್ಣತಂತ್ರಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ದಿವಾಕರ ಭಂಡಾರಿ, ಜಗದೀಶ್ ಹೆಗಡೆ, ಲಕ್ಷ್ಮಣ್ ಬಂಗೇರ, ಶಂಕರ, ಯಶೋಧ, ರಶ್ಮಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಹೆಗ್ಡೆ, ಜೊತೆ ಕಾರ್ಯದರ್ಶಿ ಸತೀಶ್ ಎಂ, ಶ್ರೀ ಸೂರ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ನಾರಾಯಣ ಪೂಜಾರಿ, ಯುವಕ ಮಂಡಲದ ಅಧ್ಯಕ್ಷ ಧೀರಜ್ ಹೆಗ್ಡೆ, ಹೊಸ್ಮರು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಪೂಜಾರಿ, ಸದಸ್ಯೆ ನಯನ, ಪ್ರಮುಖರಾದ ಗುಣಪಾಲ್ ಕುತ್ಲೂರು, ಪ್ರದೀಪ್ ಅಜ್ರಿ ರಾಮೇರ್ ಗುತ್ತು, ಶಶಿಕುಮಾರ್ ಜೈನ್, ಸತೀಶ್ ಪೂಜಾರಿ ಬಾಂದೊಟ್ಟು, ಪೂವಪ್ಪ ಪೂಜಾರಿ, ಡಿ.ಕೆ ಚಂದ್ರಶೇಖರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಪ್ಪ ಪೂಜಾರಿ, ಪ್ರಮುಖರಾದ ವಿಜಯ್ ಕುಮಾರ್ ಬಂಗ, ರೋಹನ್ ಪೂಜಾರಿ, ಯೋಗೀಶ್ ಐಸಿರಿ, ಪ್ರಸಾದ್ ಅನುಗ್ರಹ, ಸದಾಶಿವ ಸೇರಿಗಾರ್, ಶೀನ ಪುಜಾರಿ, ನಾರಾಯಣ ಬಂಗೇರ, ರವಿ ಹೆಗಡೆ ಬಿರ್ಮಟ್ಟು, ವಸಂತ ಗುಣನಿಲ, ಪ್ರವೀಣ್ ಕುಮಾರ್, ಜಗದೀಶ್ ಶ್ರೀಹರಿ ಸಂತೋಷ ಶೆಟ್ಟಿ ರಾಮಚಂದ್ರ, ಸರಸ್ವತಿ ಹೆಗಡೆ, ರತ್ನಾವತಿ ಹೆಗಡೆ, ಚಂದ್ರಿಕ, ಜಗದೀಶ್ ದಾಸ್, ಸುರೇಖಾ, ವಿನೋದ, ಶ್ರೀಧರ್ ಪೂಜಾರಿ, ರುಕ್ಮಯ ಪೂಜಾರಿ, ಸಂದಿಪ್ ಪೂಜಾರಿ, ಅಣ್ಣು ಕಾವಲಿಗುಡ್ಡೆ, ಮತ್ತಿತರರು ಉಪಸ್ಥಿತರಿದ್ದರು.









