
ಧರ್ಮಸ್ಥಳ: ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.30ರಂದು ಎರಡನೇ ದಿನದ ಉತ್ಖನನ ಕಾರ್ಯ ನಡೆಯಲಿದೆ. ಉತ್ಖನನವನ್ನು ತೀವ್ರಗತಿಯಲ್ಲಿ ಮಾಡಲು ಎಸ್ ಐ ಟಿ ನಿರ್ಧರಿಸಿದ್ದು, ಒಂದಕ್ಕಿಂತ ಹೆಚ್ಚು ತಂಡಗಳನ್ನು ರಚಿಸಿ ಎಸ್ ಐ ಟಿ ಇಂದು ಅಗೆಯುವ ಕಾರ್ಯಕ್ಕೆ ಮುಂದಾಗುವ ಸಾದ್ಯತೆಯಿದೆ. ಇದಕ್ಕಾಗಿ ಪುತ್ತೂರು ಮತ್ತು ಮಂಗಳೂರು ಎಸಿಯ ಸಾಥ್ ಪಡೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮೀಸಲು ಅರಣ್ಯದಲ್ಲಿ ಅಗೆಯುವ ಕಾರ್ಯ ಮುಂದುವರೆಯಲಿದ್ದು, ಜೆಸಿಬಿ ಬಳಸದೇ ಮಾನವ ಶ್ರಮದಿಂದಲೇ ಅಗೆಯಿಸುವ ಸಾಧ್ಯತೆ ಹೆಚ್ಚಿದೆ.