ಉಜಿರೆ: ರೆಂಜಾಳ ಗೆಳೆಯರ ಬಳಗ ಸೇವಾ ಟ್ರಸ್ಟ್ ರೆಂಜಾಳ ಉಜಿರೆ ಇದರ ಆಶ್ರಯದಲ್ಲಿ ನಡೆಯುವ 3ನೇ ವರ್ಷದ ಮೊಸರುಕುಡಿಕೆ ಉತ್ಸವದ ಸಮಿತಿಯ ಪದಾಧಿಕಾರಿಗಳ ಆಯ್ಕೆ ಗೌರವಧ್ಯಕ್ಷ ಕಿರಣ್ ಕುಮಾರ್ ಕೀರ್ತಿ ಇವರ ನಿವಾಸದಲ್ಲಿ ಮಾಡಲಾಯಿತು.
ಅಧ್ಯಕ್ಷರಾಗಿ ಕುಮಾರಿ ವಂದಿತಾ ಪ್ರಭು, ಪ್ರಧಾನ ಕಾರ್ಯದರ್ಶಿಯಾಗಿ ರೂಪಾ ರಿತೇಶ್
ಕೋಶಧಿಕಾರಿಗಳಾಗಿ ಮೋಕ್ಷಿತಾ ಹಾಗೂ ಸದಸ್ಯರುಗಳನ್ನು ರೆಂಜಾಳ ವಾರ್ಡಿನ ಸರ್ವ ಸದಸ್ಯರು ಆಯ್ಕೆ ಮಾಡಲಾಯಿತು. ಈ ಸಲದ ವಿಶೇಷ ಉತ್ಸವದ ಸಂಪೂರ್ಣ ಹೊಣೆಗಾರಿಕೆ ಮಹಿಳೆಯರು ಮುಂದೆ ನಿಂತು ವಿಜೃಂಭಣೆಯಿಂದ ಆಚರಿಸಲಿದ್ದಾರೆ.