ವೇಣೂರು ಯುವವಾಹಿನಿ, ಬಿಲ್ಲವ ಸಂಘದಿಂದ ಪುಸ್ತಕ ವಿತರಣೆ

0

ವೇಣೂರು: ಯುವವಾಹಿನಿ, ವೇಣೂರು ಘಟಕ, ಶ್ರೀ ಗು. ಸೇವಾ ಸಂಘ ಮೂಡುಕೋಡಿ, ಕಾಟಿ ಅಭಿಮಾನಿ ಬಳಗ ವೇಣೂರು ಮೂಡುಕೋಡಿ ವತಿಯಿಂದ ಉಚಿತ ಪುಸ್ತಕ ವಿತರಣೆ, ಸಾಂತ್ವನ ನಿಧಿ, ಸನ್ಮಾನ ಕಾರ್ಯಕ್ರಮವು ಜೂ. 28ರಂದು ಮೂಡುಕೋಡಿ ಉಂಬೆಟ್ಟು ಶಾಲೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಲೋಕೇಶ್ ಕೋಟ್ಯಾನ್ ನೆರವೇರಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಘಟಕದ ಅಧ್ಯಕ್ಷ ಶುಭಕರ್ ಪೂಜಾರಿ ಸಾವ್ಯಾ ವಹಿಸಿದರು. ಕಾರ್ಕ್ರಮದಲ್ಲಿ ಕೊಕ್ರಾಡಿ ಸರಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಂಶುಪಾಲ ಸಮಾಜ ಸೇವಕರು ನೋರ್ಬರ್ಟ್ ಮಾರ್ಟೀಸ್ರವರನ್ನು ಸನ್ಮಾನಿಸಲಾಯಿತು. ಘಟಕದ ಸೇವಾಯೋಜನೆಯನ್ನು ಅನಾರೋಗ್ಯದಿಂದ ಬಳಲುತ್ತಿರುವ ಮೂಡುಕೋಡಿ ನೆಲ್ಲಿಗುಡ್ಡೆ ಸುಂದರ ಪೂಜಾರಿ ದಂಪತಿಗೆ ನೀಡಲಾಯಿತು. ವೇದಿಕೆಯಲ್ಲಿ ಶ್ರೀ ಗು.ನಾ ಸ್ವಾ. ಸೇ ಸಂಘ ವೇಣೂರು ವಲಯದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಶಾಲಾ ಮುಖ್ಯಶಿಕ್ಷಕಿ ವಿನೋಧ ಕುಮಾರಿ, ಖ್ಯಾತ ಜೋತಿಷ್ಯ ಗಣೇಶ್ ನಾರಾಯಣ ಪಂಡಿತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಧನಂಜಯ, ಮೂಡುಕೋಡಿ ಬಿಲ್ಲವ ಸಂಘದ ಅಧ್ಯಕ್ಷ ರವಿ ಪೂಜಾರಿ ಉಪಸ್ಥಿತರಿದ್ದರು.

ಸಲಹೆಗಾರ ರಾಕೇಶ್ ಕುಮಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಅರುಣ್ ಕೋಟ್ಯಾನ್ ನಿರೂಪಿಸಿ, ಕಾರ್ಯದರ್ಶಿ ರಕ್ಷಿತ್ ಅಂಡಿಂಜೆ ವಂದಿಸಿದರು.

LEAVE A REPLY

Please enter your comment!
Please enter your name here