ವೇಣೂರಿನಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

0

ವೇಣೂರು: ಧೀಮಹಿ ಸನಾತನ ಪ್ರತಿಷ್ಠಾನ ಮಹಾವೀರ ನಗರ ವೇಣೂರು ರಾಷ್ಟ್ರದೇವೋಭವ ಧೀಮಹಿ ನಾಟ್ಯ ವೃಂದ, ಭರತನಾಟ್ಯ ತರಗತಿಗಳ ಉದ್ಘಾಟನಾ ಸಮಾರಂಭವು ಜೂ. 29ರಂದು ಗೌರಮ್ಮ ನರಸಿಂಹ ಭಟ್, ಭೀಮಹಿ ಸನಾತನ ಪ್ರತಿಷ್ಠಾನ ವೇಣೂರು ಇವರ ಗೌರವ ಉಪಸ್ಥಿತಿಯಲ್ಲಿ ನೆರವೇರಿತು.

ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆಯನ್ನು ನೆರವೇರಿಸಿದ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪುರಸ್ಕೃತ ಮಂಗಳೂರು ಸನಾತನ ನಾಟ್ಯಲಯದ ವಿದುಷಿ ಶಾರದಾ ಮಣಿ ಶೇಖರ್ ಮಾತನಾಡುತ್ತ ಭಾರತೀಯ ನಾಟ್ಯ ಪರಂಪರೆಗಳಲ್ಲಿ ಭರತನಾಟ್ಯಕ್ಕೆ ಅಗ್ರಸ್ಥಾನ ಇದನ್ನು ಅಭ್ಯಸಿಸಬೇಕಾದರೆ ಅತಿಯಾದ ತಾಳ್ಮೆ ಸುದೀರ್ಘ ಅಭ್ಯಾಸ ಅತ್ಯಗತ್ಯ. ತನ್ನ ಗರಡಿಯಲ್ಲಿ ಪಳಗಿದ ಅನೇಕ ಭರತನಾಟ್ಯ ವಿದುಷಿಯರನ್ನು ಸ್ಮರಿಸುತ್ತಾ ಬಾಲ ಪ್ರತಿಭೆಗಳ ಉಜ್ವಲ ಭವಿಷ್ಯಕ್ಕೆ ಆಶೀರ್ವದಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರಂಗಭೂಮಿ ಕಲಾವಿದ ನೇಮಯ್ಯ ಕುಲಾಲ್ ಮಾತನಾಡುತ್ತ ವೇಣೂರು ಪರಿಸರದ ಬಾಲ ಪ್ರತಿಭೆಗಳ ಅನಾವರಣದ ಮೂಲಕ ಸನಾತನ ಧರ್ಮದ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಧೀಮಹಿ ಪ್ರತಿಷ್ಠಾನ ಶ್ರಮಿಸುತ್ತಿದೆ ಎಂದರು. ಭರತನಾಟ್ಯ ತರಗತಿಯನ್ನು ನಡೆಸಿಕೊಡುವ ನಾಟ್ಯ ಗುರು ವಿದುಷಿ ಶ್ರವಣಕುಮಾರಿ ಹಲ್ಲಂದೋಡಿ ಮಾತನಾಡುತ್ತ ವಿದ್ಯಾರ್ಥಿಗಳು ಭರತನಾಟ್ಯ ಅಭ್ಯಾಸವನ್ನು ತುಂಬಾ ಶ್ರದ್ಧೆಯಿಂದ, ತಾಳ್ಮೆಯಿಂದ, ವಿಧೇಯತೆಯಿಂದ ಕಲಿತು ಕರಗತಗೊಳಿಸಬೇಕೆಂದು ನುಡಿದರು.
ಭರತನಾಟ್ಯ ಶಿಕ್ಷಣಾರ್ಥಿಗಳು ನಾಟ್ಯ ಗುರುಗಳಾದ ವಿದುಷಿ, ಶಾರದಾ ಮಣಿ ಶೇಖರ್ ವಿಧುಷಿ ಶ್ರವಣಕುಮಾರಿ ಇವರಿಂದ ನಾಟ್ಯ ದೀಕ್ಷೆಯನ್ನು ಪಡೆದರು. ಕುಮಾರ ಸಿದ್ಧಿವಿನಾಯಕ ಭಟ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಧೀಮಹಿ ಪ್ರತಿಷ್ಠಾನದ ಸಂಸ್ಥಾಪಕ ಯಜ್ಞನಾರಾಯಣ ಭಟ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಜಗನ್ನಾಥ ದೇವಾಡಿಗ ಹಂದೇವು ನಿರೂಪಿಸಿದ ಕಾರ್ಯಕ್ರಮವನ್ನು ಪ್ರಮೀಳಾ ದಿನೇಶ್ ಬೆಂಗಳೂರು ವಂದಿಸಿದರು.

LEAVE A REPLY

Please enter your comment!
Please enter your name here