ರಾಜ್ಯ ಕಾಂಗ್ರೇಸ್ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಕಡಿರುದ್ಯಾವರ ಪಂಚಾಯತ್ ಮುಂದೆ ಪ್ರತಿಭಟನೆ

0

ಕಡಿರುದ್ಯಾವರ: ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾದರೂ ಸುಸೂತ್ರವಾಗಿ ಆಡಳಿತ ನಡೆಸದೆ ಭೂಮಾಫಿಯ, ಪಟ್ಟಭದ್ರ ಹಿತಾಸಕ್ತಿಗಳಿಂದ ಜನರಿಗೆ ಸುಲಭ ರೀತಿಯ ಸೇವೆ ದೊರಕದೆ ಭಷ್ಟಚಾರದ ಕೂಪದಿಂದ ಸ್ರೀ ಸಾಮಾನ್ಯರ ಹಣ ದೋಚಲು ಅವೈಜ್ಞಾನಿಕ ನಿಯಮ ರೂಪಿಸಿ ಅಲೆದಾಟದ ಭಾಗ್ಯ ಒದಗಿಸಿರುವುದನ್ನು ಹಾಗೂ

9/11 ನಿವೇಶನಗಳ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ, ಅಕ್ರಮ ಸಕ್ರಮ ತಿರಸ್ಕರಿಸುವುದನ್ನು ಖಂಡಿಸಿ, ಬಡವರ ಅಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆಗೆ ಒತ್ತಾಯಿಸಿ, ವೃದ್ಯಾಪ ವೇತನ, ಸಂಧ್ಯಾ ಸುರಕ್ಷಾ ಹಣ ಬಿಡುಗಡೆಗೆ ಒತ್ತಾಯಿಸಿ, ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ, ವಿದ್ಯುತ್ ದರ ಏರಿಕೆಯನ್ನು ಖಂಡಿಸಿ, ಗೃಹ ನಿರ್ಮಾಣಕ್ಕೆ ಪೂರಕವಾದ ಮರಳು ಹಾಗೂ ಕೆಂಪುಕಲ್ಲು ಸಾಗಾಣಿಕೆ ನಿರ್ಬಂಧ ರದ್ದತಿಗೆ ಆಗ್ರಹಿಸಿ, ಭಾರತೀಯ ಜನತಾ ಪಾರ್ಟಿ ಕಡಿರುದ್ಯಾವರ ಗ್ರಾ. ಪಂಚಾಯತ್ ಮುಂದೆ ಜೂ.23ರಂದು ಪ್ರತಿಭಟನೆ ನಡೆಸಿದರು.

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಮರ್ಪಣೆಯನ್ನು ಹೇಡ್ಯಾ ಮಾರಿಯಮ್ಮ ಸೇವಾ ಸಮಿತಿಯ ಕಟ್ಟಡದಲ್ಲಿ ಮಾಡಲಾಯಿತು. ಅವರ ಬಗ್ಗೆ ಪ್ರಭಾಕರ ಶೆಣೈ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಪ್ರಾಸ್ತವಿಕವಾಗಿ ಸೂರಜ್ ವಳಂಬ್ರ ಮಾತಾಡಿದರು. ಅಶೋಕ್ ಕುಮಾರ್ ಅವರು ರಾಜ್ಯ ಸರಕಾರದ 9/11 ನಕ್ಷೆಗೆ ಮೂಡದಿಂದ ಅನುಮತಿ ಪಡೆಯದೆ ಆದೇಶ ಮಾಡಿದ್ದು ಅದರಿಂದ ಜನರಿಗಾಗುವ ತೊಂದರೆ ಬಗ್ಗೆ, ಕಟ್ಟಡ ಸಂಖ್ಯೆ ಇದ್ದರು ವಿದ್ಯುತ್ ಸಂಪರ್ಕ ಪಡೆಯಲು ವಾಸಯೋಗ್ಯ ಪ್ರಮಾಣ ಪತ್ರದ ಆದೇಶದ ಬಗ್ಗೆ, ನೋಂದಾವಣೆ ಶುಲ್ಕವನ್ನು. 2% ದಿಂದ 10% ಮಾಡಿರುವಬಗ್ಗೆ ಹಾಗೂ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡಿ ಆಕ್ರೋಶವನ್ನು ವ್ಯಕ್ತಪಡಿಸಿ ತಕ್ಷಣ ಜನವಿರೋಧಿ ಆದೇಶಗಳನ್ನು ವಾಪಾಸ್ ಪಡೆಯುವಂತೆ ಹೇಳಿದರು. ತಪ್ಪಿದರೆ ಮುಂದೆ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಮಾಡುವುದಾಗಿ ಹೆಚ್ಚರಿಕೆಯನ್ನು ನೀಡಿದರು ಪ್ರತಿಭಟನೆಯಲ್ಲಿ ಪಂಚಾಯತ್ ಅಧ್ಯಕ್ಷೆ ರತ್ನಾವತಿ, ಉಪಾಧ್ಯಕ್ಷೆ ಸಾವಿತ್ರಿ ಪಂಚಾಯತ್ ಸದಸ್ಯ ರಾಜೇಶ್, ಹಿರಿಯರಾದ ಪ್ರಭಾಕರ ಶೆಣೈ, ಪ್ರಶಾಂತ್ ಅಂತರ, ರೇಣುಕಾ ರಮೇಶ್, ಹೇಮಾವತಿ, ರಾಮಚಂದ್ರ ಜನಾರ್ದನ ಕಾನರ್ಪ, ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಆನಂದ ಗೌಡಬರಮೇಲು, ಪ್ರಮುಖ ಕಾರ್ಯಕರ್ತರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here