ಬದ್ಯಾರ್: 100ವರ್ಷಗಳ ಇತಿಹಾಸ ಹೊಂದಿರುವ ಬದ್ಯಾರ್ ಫಾ. ಎಲ್. ಎಂ ಪಿಂಟೊ ಆಸ್ಪತ್ರೆಯಲ್ಲಿ ಹೊಸ ತುರ್ತು ಬ್ಲಾಕ್ಗೆ ಶಿಲಾನ್ಯಾಸ ಮತ್ತು ಆಶೀರ್ವಾಚನಾ ಕಾರ್ಯಕ್ರಮ ಜೂ. 21ರಂದು ನಡೆಯಿತು.
ಮಂಗಳೂರಿನ ಬಿಷಪ್ ಮತ್ತು ಫಾದರ್ ಎಲ್.ಎಂ. ಪಿಂಟೊ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೌರವಾನ್ವಿತ ಡಾ. ಪೀಟರ್ ಪೌಲ್ ಸಲ್ಡಾನಾ ಶಿಲಾನ್ಯಾಸ ನೆರವೇರಿಸಿ ಆಶೀರ್ವಾಚನ ಗೈದರು.
ಮುಖ್ಯ ಅತಿಥಿಗಳಾಗಿ ತುರ್ತು ಬ್ಲಾಕ್ಗೆ ಶಿಲೆ ಹಾಕುವುದರೊಂದಿಗೆ ಅನಿವಾಸಿ ಭಾರತೀಯ ಉದ್ಯಮಿ ಮತ್ತು ರೂ 75ಲಕ್ಷ ವೆಚ್ಚದಲ್ಲಿ ಹೊಸ ತುರ್ತು ಬ್ಲಾಕ್ನ ದಾನಿ ಮೈಕೆಲ್ ಡಿ’ಸೋಜಾ ಮತ್ತು ಪ್ಲಾವಿಯ ಡಿಸೋಜಾ ದಂಪತಿಗಳು ನೆರವೇರಿಸಿದರು.

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಫಾದರ್ ವಾಲ್ಟರ್ ಡಿ’ಮೆಲ್ಲೊ, ಸಿ.ಓ.ಡಿ.ಪಿ ಸಂಸ್ಥೆ ನಿರ್ದೇಶಕ ಫಾ. ವಿನ್ಸ್ಸೆಂಟ್, ಮಂಗಳೂರು ಧರ್ಮ ಪ್ರಾಂತ್ಯದ ಎಸ್ಟೇಟ್ ನ ವ್ಯವಸ್ಥಾಪಕ ನಿರ್ದೇಶಕ ಫಾ. ಮೈಕಲ್, ಸಂತ ರಾಫಯೆಲ್ ಚರ್ಚ್, ಬದ್ಯಾರ್ ಪಾಲನ ಮಂಡಳಿ ಉಪಾಧ್ಯಕ್ಷೆ ಪ್ರೇಮಲತಾ ಫ್ರಾಂಕ್ ಉಪಸ್ಥಿತರಿದ್ದರು.

ಬದ್ಯಾರ್ ಎಲ್.ಎಂ ಪಿಂಟೊ ಆಸ್ಪತ್ರೆ ಆಡಳಿತಾಧಿಕಾರಿ ಫಾದರ್ ರೋಷನ್ ಕ್ರಾಸ್ತಾ ಪ್ರಾಸ್ತವಿಕವಾಗಿ ಮಾತನಾಡಿದರು. ಇಂಜಿನಿಯರ್ ಎಸ್. ಎಲ್. ವಿ ಕನ್ಸ್ಟ್ರಕ್ಷನ್ ನ ಸಂಪತ್, ಉದ್ಯಮಿ ವಿಜಯ ಸಿಕ್ವೆರಾ, ಮಲ್ಲಿಪ್ಪಾಡಿ ದೇವಸ್ಥಾನದ ಟ್ರಸ್ಟಿ ಅಮರಾನಾಥ್, ಅತ್ತೂಸ್ ವೇಗಸ್, ರಫಾಯೇಲ್ ವೇಗಸ್, ಮ್ಯಾಕ್ಸಿಮ್ ಸಿಕ್ವೆರಾ, ರಿಚರ್ಡ್ ಗೋವಿಯಸ್, ವಿಮುಕ್ತಿ ನಿರ್ದೇಶಕ ಫಾ. ವಿನೋದ್ ಮಸ್ಕ್ಯಾರೆನ್ಹಸ್, ಸಿ.ಎ ಲೈನಲ್ ಅರನ್ಹ, ಓಸ್ವಾಲ್ಡ್ ರೋಡ್ರಿಗಸ್, ಸ್ಟಿಫನ್, ಗ್ರೇಟ್ಟಾ ಡಿಕೋಸ್ತಾ, ವಲೇರಿಯನ್ ಕ್ರಾಸ್ತಾ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ಫ್ರೆಂಡ್ಸ್ ಬದ್ಯಾರ್ ನ ಪದಾಧಿಕಾರಿಗಳು, ಬದ್ಯಾರ್ ಸಂತ ರಫಯೇಲ್ ಚರ್ಚ್ ಪಾಲನ ಮಂಡಳಿ ಸದಸ್ಯರು ಭಾಗವಹಿದ್ದರು.
ಆಸ್ಪತ್ರೆ ಲೋಗೋ, ವೆಬ್ಸೈಟ್ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ, 100ವರ್ಷ ತುಂಬುವ ಈ ಆಸ್ಪತ್ರೆಗೆ ಹಲವಾರು ಆರ್ಥಿಕ ನೆರವು ನೀಡಿದ್ದಾರೆ. ಇದರಿಂದ ಹೊಸ ತುರ್ತು ನಿಗಾ ಘಟಕ ಪ್ರಾರಂಭಿಸಲು ಸಾಧ್ಯ ಮತ್ತು ಮುಂದಿನ ದಿನಗಳಲ್ಲಿ ಶಿಕ್ಷಣದೊಟ್ಟಿಗೆ ಆಸ್ಪತ್ರೆ ಮುಂದುವರಿಸಲು ಯೋಚನೆ ಮಾಡುತ್ತಿದ್ದೇವೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪೌಲ್ ಸಲ್ದಾನಾ ಹೇಳಿದರು. ಹೊಸ ಬ್ಲಾಕ್ ನ ದಾನಿ ರೂ. 75ಲಕ್ಷ ಚೆಕ್ ಹಸ್ತಾಂತರಿಸಿ ಅನಿವಾಸಿ ಭಾರತೀಯ ಮೈಕಲ್ ಡಿಸೋಜ ಮಾತನಾಡಿ ದೇವರು ನಮಗೆ ಕೊಟ್ಟಿದ್ದಾರೆ ಅದನ್ನು ಸಮಾಜಕ್ಕಾಗಿ ದಾನ ಮಾಡುತ್ತಿದ್ದೇವೆ ಎಂದರು.