ಗುತ್ತಿನಬೈಲು ಸ. ಹಿ. ಪ್ರಾ. ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ

0

ಗುತ್ತಿನಬೈಲು: ಜೂ. 20ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನೆರವೇರಿಸಲಾಯಿತು. ಉಚಿತ ನೋಟ್ ಬುಕ್ಕಿನ ರೂವಾರಿಗಳಾದ ವಿದ್ಯಾಭಿಮಾನಿ ಮುರಳಿ ಬಿ. ನೋಟರಿ ವಕೀಲರು ಬೆಳ್ತಂಗಡಿ ಹಾಗೂ ಅವರ ಪುತ್ರರಾದ ಮಂದಾರ ಹಾಗೂ ಮಯೂರ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಸರ್ಕಾರಿ ಶಾಲೆಯ ಸಬಲೀಕರಣಕ್ಕಾಗಿ ಮುರಳಿ ಬಿ. ನೋಟರಿ ಅವರು ಸುಮಾರು ವರ್ಷಗಳಿಂದ ಗುತ್ತಿನಬೈಲು ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ನೀಡುತ್ತಾ ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುತ್ತಿನ ಬೈಲು ಶಾಲೆಯ ಎಸ್. ಡಿ.ಎಂ. ಸಿ. ಅಧ್ಯಕ್ಷ ಪ್ರಭಾಕರ್ ಭಟ್, ಮೇಲಂತ ಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲೋಕನಾಥ ಶೆಟ್ಟಿ, ಸ್ಪೋಕನ್ ಇಂಗ್ಲೀಷ್ ತರಗತಿ ನಡೆಸುವ ವಿವೇಕ್ ಶೆಟ್ಟಿ ಹಾಜರಿದ್ದರು.

ನಮಿತಾ ಆರ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕ ವಸಂತ ಗುಡಿಗಾರ್ ನೆರವೇರಿಸಿದರು. ಶ್ಯಾಮಲ ಕೆ. ವಂದಿಸಿದರು.

LEAVE A REPLY

Please enter your comment!
Please enter your name here