ಬೆಳ್ತಂಗಡಿ: ಜೂ.20ರಂದು 11.30 ಗಂಟೆಗೆ ವೇಣೂರು ಠಾಣಾ ಪೊಲೀಸರು ದಾಳಿ ನಡೆಸಿ ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದ ಗುಂಡೂರಿ ಬಳಿ ಇರುವ ಹರೀಶ್ ಸ್ಟೋರ್ ಎಂಬ ದಿನಸಿ ಅಂಗಡಿಯಲ್ಲಿ ಹರೀಶ್ ಪೂಜಾರಿ ಎಂಬಾತ ಅಕ್ರಮವಾಗಿ ಮದ್ಯ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ತನ್ನ ಅಂಗಡಿಯೊಳಗೆ ಒಂದು ಪ್ಲಾಸ್ಟಿಕ್ ಚೀಲದಲ್ಲಿ 90 ML ಸಾಮರ್ಥ್ಯದ Mysore Lancer Wshiky ಎಂದು ಬರೆದಿರುವ 44 ಮದ್ಯ ತುಂಬಿದ ಸ್ಯಾಚೆಟ್ಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿಕೊಂಡಿರುವುದನ್ನು ಪತ್ತೆ ಹಚ್ಚಲಾಗಿದ್ದು ಮದ್ಯದ ಒಟ್ಟು ಪ್ರಮಾಣ 3.960 ಲೀಟರ್ ಆಗಿದೆ. ಇದರ ಅಂದಾಜು ಮೌಲ್ಯ ರೂ 1760/- ಆಗಿದೆ. ಘಟನೆಗೆ ಸಂಬಂಧಿಸಿ ಮೂಡುಕೋಡಿ ಗ್ರಾಮದ ನಾರ್ಲ ನಿವಾಸಿ ಹರೀಶ್ ಪೂಜಾರಿ( 53) ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.