ನಾರಾವಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯಕರೆ, ತಾಲೂಕಿನ ನಾರಾವಿ ವಲಯದ ಸುಲ್ಕೇರಿ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಸಂದೀಪ್ ಶೆಟ್ಟಿ ಅವರಿಗೆ ಅನಾರೋಗ್ಯ ಕಾರಣ ಶೌರ್ಯ ವಿಪತ್ತು ಘಟಕದಿಂದ ನೀಡಲಾದ ಆರೋಗ್ಯ ವಿಮೆ 60000 / ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು.
ಒಕ್ಕೂಟ ಅಧ್ಯಕ್ಷ ಯಶೋಧರ ಪೂಜಾರಿ, ಜನ ಜಾಗೃತಿ ಸದಸ್ಯ ಸದಾನಂದ ಗೌಡ, ನಿವೃತ್ತ ಪ್ರಾದೇಶಿಕ ನಿರ್ದೇಶಕ ವಿಶ್ವನಾಥ ಶೆಟ್ಟಿ, ಗ್ರಾಮ ಸಮಿತಿ ಅಧ್ಯಕ್ಷ ರಾಮಶೆಟ್ಟಿ, ವಲಯದ ಮೇಲ್ವಿಚಾರಕಿ ವಿಶಾಲ ಕೆ., ಸೇವಾ ಪ್ರತಿನಿಧಿ ಮಮತಾ ಶೆಟ್ಟಿ, ವಿಪತ್ತು ಘಟಕ ಸಂಯೋಜಕ ದಿನೇಶ ಶೆಟ್ಟಿ ಮತ್ತು ಉಪ ಸಮಿತಿಯವರು, ದಾಖಲಾತಿ ಒಕ್ಕೂಟ ಸದಸ್ಯರು ಉಪಸ್ಥಿತಿಯಲ್ಲಿದ್ದರು.