ಕೊಯ್ಯೂರು: ಮಿಥುನ ಸಂಕ್ರಮಣದ ಪ್ರಯುಕ್ತ ಕೊಯ್ಯೂರಿನ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೌಗಂಧಿಕಾ ಹರಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಶ್ರೀ ಪಂಚ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ಕೊಯ್ಯೂರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದೇವಸ್ಥಾನದ ಅರ್ಚಕರಾದ ಅಶೋಕ್ ಕುಮಾರ್ ಭಾಂಗೀಣ್ಣಾಯರ ನೇತೃತ್ವದಲ್ಲಿ ಕಾರ್ಯಕ್ರಮವು ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಂದನಾ ಮಾಲೆಂಕಿ ಮತ್ತು ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ಕೋಡಿಯಲು, ಮೃದಂಗ ಮತ್ತು ಚಂಡೆಯಲ್ಲಿ ವಿದ್ಯಾರ್ಥಿಗಳಾದ ರತನ್ ಮುಂಡಾಜೆ ಮತ್ತು ಸಮರ್ಥ್ ಹೊಳ್ಳ ಭಾಗವಹಿಸಿದರು. ಮುಮ್ಮೇಳದಲ್ಲಿ ಹನುಮಂತನಾಗಿ ಪ್ರೊ. ಮಧೂರು ಮೋಹನ ಕಲ್ಲೂರಾಯ, ಭೀಮನಾಗಿ ದಿನೇಶ್ ಆಚಾರ್ಯ ಕೊಯ್ಯರು, ಬ್ರೌವದಿಯಾಗಿ ರಾಮಕೃಷ್ಣ ಭಟ್ ಉಜಿರೆ ಹಾಗೂ ಯಕ್ಷಮಂತ್ರಿಯಾಗಿ ಬಾಸಮೇ ನಾರಾಯಣ ಭಟ್ ಸಹಕರಿಸಿದರು. ದೇವಸ್ಥಾನದ ಆಡಳಿತ ಮೊಕ್ತಸರ ಹರೀಶ್ ಬಲ್ಲಾಳ್ ಎಲ್ಲರನ್ನೂ ಗೌರವಿಸಿದರು.