ಮಲವಂತಿಗೆ: ಗ್ರಾಮದ ಕಾಜೂರು ದಿಡುಪೆ ರಸ್ತೆಯ ನೆಲ್ಲಿಗುಡ್ಡೆ ಸಮೀಪದ ನಾರಾಯಣ ಪಾಟಲಿ ಇವರ ಮನೆಗೆ ಹಾದು ಹೋಗುವ ರಸ್ತೆಯ ಸಮೀಪ ಜೂ.16ರಂದು ಸುರಿದ ಧಾರಾಕಾರ ಮಳೆಗೆ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಧರೆಗುರುಳಿ ವಾಹನ ಸಂಚಾರಕ್ಕೆ ಅಡಚಣೆ ಆದ ಘಟನೆ ನಡೆದಿದೆ.

ಮೆಸ್ಕಾಂ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದಿಂದ ಧರೆಗುರುಳಿದ ವಿದ್ಯುತ್ ಕಂಬ ಹಾಗೂ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.