ಮುಂಡಾಜೆ: ರೋಟರಿ ಕ್ಲಬ್ ಬೆಳ್ತಂಗಡಿಯ ಸಾರಥ್ಯದಲ್ಲಿ ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರ, ಕ್ಯಾನ್ ಫಿನ್ ಹೋಮ್ಸ್ ಲಿ. ಬೆಂಗಳೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಮತ್ತಿತರ ದಾನಿಗಳ ನೆರವಿನಿಂದ 18000 ಚದರ ಅಡಿಯಲ್ಲಿ ತರಗತಿ ಕೊಠಡಿ, ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಲ್ಯಾಬ್, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಹೀಗೆ ಸುಮಾರು 2.25ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲಾ ಕಟ್ಟಡ “ಸಿಂಧೂರ” ಜೂ.20ರಂದು ಲೋಕಾರ್ಪಣೆಗೊಳ್ಳಲಿದೆ.
ರೋಟರಿ ಅಧ್ಯಕ್ಷ ಅನಂತ ಭಟ್ ಮಚ್ಚಿ ಮಲೆ ಮತ್ತು ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಮಹತ್ವದ ಪಾತ್ರ ವಹಿಸಿ ನಿರ್ಮಾಣ ಮಾಡಿರುವ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದಾರೆ. ಸಿಂಧೂರ ಕಟ್ಟಡದ ಉದ್ಘಾಟನೆಯನ್ನು ರೊ. ವಿಕ್ರಂ ದತ್ತ, ಜಿಲ್ಲಾ ಗವರ್ನರ್ .ರೋಟರಿ ಜಿಲ್ಲೆ 3181 ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಂಗಳೂರು, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಬಂಗೇರ, ಪ್ರಶಾಂತ್ ಜೋಶಿ ಕ್ಯಾನ್ ಫಿನ್ ಹೋಮ್ಸ್ ಲಿ., ಬೆಂಗಳೂರು ಆಗಮಿಸಲಿದ್ದಾರೆ. ಕ್ಯಾನ್ ಫಿನ್ ಹೋಮ್ಸ್, ಬೆಂಗಳೂರು, ರೂ. 12ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗಾಗಿ ಶೌಚಾಲಯವನ್ನು ನಿರ್ಮಿಸಲು ಧನ ಸಹಾಯ ಮಾಡಿದ್ದಾರೆ.
ವಿಶೇಷ ಅತಿಥಿಗಳಾಗಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ ನವಶಕ್ತಿ ಗುರುವಾಯನಕೆರೆ, ಲಕ್ಷ್ಮಿ ಇಂಡಸ್ಟ್ರೀಸ್ ಉಜಿರೆ.ಕೆ.ಮೋಹನ್ ಕುಮಾರ್, ಶತಾಬಿ ವಿದ್ಯಾಲಯ ಸಮಿತಿ ಮುಂಡಾಜೆ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ ವೆಂಕಟೇಶ ತುಳುಪುಳೆ, ನಿಕಟಪೂರ್ವ ಜಿಲ್ಲಾ ಗವರ್ನರ್ ರೊ.ಹೆಚ್.ಆರ್. ಕೇಶವ, ಬೆಂಗಳೂರು ರೋಟರಿ ಕ್ಲಬ್ ಅಧ್ಯಕ್ಷೆ ರೊ. ಸುಪ್ರಿಯ ಕಂದಾರಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ.ಪೂರನ್ ವರ್ಮ ಮತ್ತು ರೊ. ಅನಂತ ಭಟ್ ಮಚ್ಚಿಮಲೆ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತ ಗಣ್ಯರಾಗಿ ರೊ. ರಾಮಕೃಷ್ಣ DGN ರೋಟರಿ ಜಿಲ್ಲೆ, 3181, ರೊ ಸತೀಶ್ ಬೋಳಾರ್ DGN ರೋಟರಿ ಜಿಲ್ಲೆ 3181,ರೊ. ಯಶಸ್ವಿ ಸೋಮಶೇಖರ್ DGND, ರೋಟರಿ ಜಿಲ್ಲೆ -3181 ರೂ. ಮಹಮ್ಮದ್ ವಳವೂರು ಸಹಾಯಕ ಗವರ್ನರ್ ರೋಟರಿ ಜಿಲ್ಲೆ- 3181, ರೊ. ಮನೋರಮ ಭಟ್ ವಲಯ ಸೇನಾನಿ, ರೋಟರಿ ಜಿಲ್ಲೆ, 3181, ರೊ.ರಿತೇಶ್ ಬಾಳಿಗ ಜಿಲ್ಲಾ ಕಾರ್ಯದರ್ಶಿ ರೋಟರಿ ಜಿಲ್ಲೆ- 3181 ರೊ. ಜಗದೀಶ್ ಮುಗುಳಿ, ಆಡಳಿತ ನಿರ್ದೇಶಕರು ಜೆ.ಐ ಆಟೋ ಪ್ರೈವೇಟ್ ಲಿಮಿಟೆಡ್. ಕೇಶವ ಪ್ರಸಾದ್ ಎಸ್. ಮದಂಗಲ್ಲು, ರೊ. ಪ್ರಕಾಶ ನಾರಾಯಣ ಅಧ್ಯಕ್ಷ ಮುಂಡಾಜೆ ಪ್ಯಾಕ್, ಕಿರಣ ಚಂದ್ರ ಡಿ. ಪುಷ್ಪಗಿರಿ. ಯುವ ಉದ್ಯಮಿ, ರೊ.ಡಾ ಎ. ಜಯಕುಮಾರ್ ಶೆಟ್ಟಿ, ನಿಯೋಜಿತ ಸಹಾಯಕ ಗವರ್ನರ್, ರೋಟರಿ ಜಿಲ್ಲೆ -3181 ರೊ. ಪ್ರಕಾಶ್ ಪ್ರಭು, ನಿಯೋಜಿತ ಅಧ್ಯಕ್ಷ ರೋಟರಿ ಕ್ಲಬ್ ಬೆಳ್ತಂಗಡಿ, ರೊ. ಶರತ್ ಕೃಷ್ಣ ಪಡುವೆಟ್ನಾಯ, ಆಡಳಿತ ಮೊಕ್ತೇಸರರು, ಶ್ರೀ ಜನಾರ್ಧನ ದೇವಸ್ಥಾನ ಉಜಿರೆ ವಾಮನ ಪೈ ಉದ್ಯಮಿ, ಪುತ್ತೂರು. ರೊ. ಶ್ರೀಕಾಂತ ಕಾಮತ್, ಅಧ್ಯಕ್ಷ, ರೋಟರಿ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಬೆಳ್ತಂಗಡಿ ಅವರನ್ನು ಆಹ್ವಾನಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಗ್ರಾಮೀಣ ಪ್ರದೇಶವಾಗಿದ್ದು 1969ರಲ್ಲಿ ದಿವಂಗತ ಜಿ.ಎನ್.ಭಿಡೆಯಲ್ಲಿ ಹೈಸ್ಕೂಲ್ ಸ್ಥಾಪಿಸಿದರು. ಮುಂದೆ 1991ರಲ್ಲಿ ಜೂನಿಯರ್ ಕಾಲೇಜು, ಸರಸ್ಕೃತಿ ಆಂಗ್ಲ ಮಾಧ್ಯಮ ಶಾಲೆಯನ್ನೂ (Lkg ಯಿಂದ 10ನೆ ತರಗತಿ )ಸ್ಥಾಪಿಸಿದರು. ಭೀಡೆಯವರ ನಂತರ ಶ್ರೀಧರ ಜಿ. ಭಿಡೆ ಈ ಸಂಸ್ಥೆಯ ಸಾರಥ್ಯವನ್ನು ವಹಿಸಿ ಮುನ್ನಡೆಸಿದರು.
2018ರಿಂದ ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ)ನ ಸುಪರ್ದಿಯಲ್ಲಿ ಈ ಎಲ್ಲ ಸಂಸ್ಥೆಗಳು ನಡೆಯುತ್ತಿದ್ದು. ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಪ್ರಕೃತ ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ 260ಕ್ಕೂ ಮೀರಿ ವಿದ್ಯಾರ್ಥಿ ಗಳಿದ್ದು ಒಟ್ಟು ಸಂಖ್ಯೆ 900ನ್ನು ದಾಟಿದೆ.
ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲಾ ಕಟ್ಟಡ ಶಿಥಿಲವಾಗಿದ್ದು, ಈ ಕಟ್ಟಡವನ್ನು ವೀಕ್ಷಿಸಿದ್ದ ಅಂದಿನ ರೋಟರಿ ಕ್ಲಬ್ (2023 /2024) ಅಧ್ಯಕ್ಷ ರೊ. ಅನಂತ ಭಟ್ ಮಚ್ಚಿಮಲೆ ಒಂದು ವರ್ಷದ ಅವಧಿಯಲ್ಲಿ ಕನ್ನಡ ಮಾಧ್ಯಮ ಹೈಸ್ಕೂಲಿಗೆ ನೂತನ ಕಟ್ಟಡವನ್ನು ಕಟ್ಟುವ ಕನಸು ಕಂಡರು. 20/10/2023ರಂದು ರೊ. ಹೆಚ್. ಆರ್.ಕೇಶವ, ಅಂದಿನ ಡಿ.ಜಿ.ರೋಟರಿ ಜಿಲ್ಲೆ- 3181 ಶಿಲಾನ್ಯಾಸ ನೆರವೇರಿಸಿದ್ದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ಡಾ. ಕೃಷ್ಣ ಭಟ್ ಕಾರ್ಯದರ್ಶಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ರೊ.ಸಂದೇಶ ರಾವ್, ಕಾರ್ಯದರ್ಶಿ ರೋಟರಿ ಕ್ಲಬ್ ಬೆಳ್ತಂಗಡಿ, ವಿನಯ ಚಂದ್ರ, ಅಧ್ಯಕ್ಷರು ವಿವೇಕಾನಂದ ವಿದ್ಯಾಸಂಸ್ಥೆ, ಮುಂಡಾಜೆ. ರೊ.ವಿದ್ಯಾ ಕುಮಾರ್ ಕಾಂಚೋಡು, ನಿಕಟಪೂರ್ವ ಕಾರ್ಯದರ್ಶಿ, ರೋಟರಿ ಕ್ಲಬ್ ಬೆಳ್ತಂಗಡಿ. ನಾರಾಯಣ ಫಡಕೆ, ಸಂಚಾಲಕ ಮುಂಡಾಜೆ ಅನುದಾನಿತ ಪ್ರೌಢಶಾಲೆ. ಜಯಂತಿ ಮುಖ್ಯೋಪಾಧ್ಯಾಯಿನಿ ಮುಂಡಾಜೆ ಅನುದಾನಿತ ಪ್ರೌಢಶಾಲೆ, ಕಜೆ ವೆಂಕಟೇಶ್ವರ ಭಟ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಹಿರಿಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಮುಂಡಾಜಿ ಅನುದಾನಿತ ಪ್ರೌಢಶಾಲೆ ಆಮಂತ್ರಿಸಿದ್ದಾರೆ.