ನೆಲ್ಯಾಡಿ: ಎಲೈಟ್ ಇಂಡೋರ್ ರ್ಕೋರ್ಟ್ ನಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಶಟಲ್ ಬಾಡ್ಮಿಂಟನ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಕಡೆಗಳಿಂದ ಮೂವತ್ತಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಿತು. ಆರ್ಲ ಸೆಂಟ್ ಮೇರಿಸ್ ಚರ್ಚ್ ನ ಯುವ ಘಟಕ ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಇದರ ನೇತೃತ್ವದಲ್ಲಿ ಪಂದ್ಯಾಟವನ್ನು ಆಯೋಜಿಸಲಾಯಿತು. ಕುಲಶೇಖರ ಕೊರ್ಡಲ್ ಚರ್ಚ್ ನ ಆರುಷ್ – ಸೂರಜ್ ಪ್ರಥಮ ಬಹುಮಾನವನ್ನು, ನೆಲ್ಯಾಡಿಯ ಲಿಜೊ -ಜೆಸ್ವಿನ್ ತಂಡ ದ್ವಿತೀಯ ಸ್ಥಾನವನ್ನು, ಬಜಗೋಳಿಯ ಅನೂಪ್ -ಬಿಬಿನ್ ತೃತೀಯ ಸ್ಥಾನವನ್ನು, ತೋಟ್ಟ ತಾಡಿಯ ರೋಬಿನ್ -ಟಿನೋಶ್ ಚತುರ್ಥ ಸ್ಥಾನವನ್ನು ಪಡೆದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಆರ್ಲ ಚರ್ಚ್ ಗಳ ಧರ್ಮ ಗುರು ಫಾ. ಶಾಜಿ ಮಾತ್ಯು, ಫಾ. ಅಲೆಕ್ಸ್, ಯುವ ಮುಖಂಡರಾದ ಶ್ರೀಜಿತ್, ಶಾರೋನ್, ಜಿನು ಡಿವಿನ್, ಜಿತು, ಅಜಿತ್, ಪ್ರಥ್ವಿನ್ ಹಾಗೂ ಟ್ರಸ್ಟಿ ಗಳಾದ ಹೃದಿತ್, ಜೈಸನ್, ಜೋಸ್ಟಿನ್ ಉಪಸ್ಥಿತರಿದ್ದರು.