ಪದ್ಮುಂಜ: ಖಲಂದರ್ ಷಾ ಜುಮ್ಮಾ ಮಸೀದಿಯಲ್ಲಿ ಅಹ್ಮದಾಬಾದಿನಲ್ಲಿ ವಿಮಾನ ದುರಂತದಲ್ಲಿ ಮೃತಪಟ್ಟವರ ಆತ್ಮ ಶಾಂತಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಮಸೀದಿಯ ಮುಖ್ಯ ಗುರುಗಳಾದ ಹುಸೈನ್ ಸುಲ್ತಾನಿ ಸಅದಿಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ (ದುಆ) ನಡೆಯಿತು.
ಜಮಾಅತ್ ನಾಯಕರು, ಕೆ.ಎಂ.ಜೆ., ಎಸ್.ವೈ.ಎಸ್., ಎಸ್.ಎಸ್.ಎಫ್., ಎಸ್.ಬಿ.ಎಸ್. ನಾಯಕರು ಉಪಸ್ಥಿತರಿದ್ದರು.