ಅಳದಂಗಡಿ: ಸೂಳಬೆಟ್ಟು ಲಕ್ಷ್ಮೀ ಕೃಪಾ ಪುಷ್ಪಾವತಿ, ಲಕ್ಷ್ಮೀನಾರಾಯಣ ಗೊಲ್ಲ ಇವರ ಮನೆಯಲ್ಲಿ 5ನೇ ವರ್ಷದ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ತಾಳಮದ್ದಳೆಯ ಸಮಾರಂಭವನ್ನು ದಿನೇಶ್ ಶೆಟ್ಟಿ ಕಾವಲಕಟ್ಟೆ, ಭಾಗವತರಾದ ಭರತ್ ಶೆಟ್ಟಿ, ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಎನ್. ವೀರೇಂದ್ರ ಕುಮಾರ್ ಜೈನ್, ದಿನೇಶ್ ಪಿ.ಕೆ. ಬಳಂಜ ಉದ್ಘಾಟಿಸಿದರು.
ದಿನೇಶ್ ಗೊಲ್ಲ, ರಾಮಯ್ಯ ಗೊಲ್ಲ, ಪವನ್ ಜೈನ್ ರಾಜಪಾದೆ, ರಾಜವರ್ಮ ಜೈನ್ ನಾವರ ಉಪಸ್ಥಿತರಿದ್ದರು . ಹಿಮ್ಮೆಳದಲ್ಲಿ ಭಾಗವತರಾಗಿ ಭರತ್ ಶೆಟ್ಟಿ ಸಿದ್ದಕಟ್ಟೆ, ಗಣೇಶ್ ಭಟ್ಟ್ ಬೆಳಾಲು, ಚಂದ್ರ ಶೇಖರ ಸರಪಾಡಿ , ಜಗದೀಶ್ ಚಾರ್ಮಾಡಿ ಹಾಗೂ ಮುಮ್ಮೆಳದಲ್ಲಿ ದಿನೇಶ್ ಶೆಟ್ಟಿ ಕಾವಲ್ ಕಟ್ಟೆ, ದಿನೇಶ್ ಪಿ.ಕೆ. ಬಳಂಜ, ಸತೀಶ್ ಶಿರ್ಲಾಲು, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಹರೀಶ್ ಭಟ್ ಬೊಳಂತಿಮೊಗರು ಭಾಗವಹಿಸಿದ್ದರು.