ಬೆಳ್ತಂಗಡಿ: ಆಮಂತ್ರಣ ಪರಿವಾರ ಆಮಂತ್ರಣ ಸೇವಾ ಪ್ರತಿಷ್ಠಾನ ಹೆಸರಿನಲ್ಲಿ ನೋಂದಾವಣೆ ಗೊಂಡಿದೆ. ಪ್ರತಿಷ್ಠಾನದ ಅಧ್ಯಕ್ಷರಾಗಿ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಗೌರವಾಧ್ಯಕ್ಷರಾಗಿ ವಿಜಯ ಕುಮಾರ್ ಜೈನ್ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಅರುಣ್ ಜೈನ್ ಅಳದಂಗಡಿ, ಸದಾನಂದ ಬಿ. ಕುದ್ಯಾಡಿ ಟ್ರಸ್ಟಿಯಾಗಿ ಆಯ್ಕೆಯಾಗಿದ್ದಾರೆ.
ಆಮಂತ್ರಣ ಸತತ ರಾಜ್ಯ ಮಟ್ಟದಲ್ಲಿ ನಿರಂತರ ಕಾರ್ಯಕ್ರಮಗಳು ಸೇವಾ ಚಟುವಟಿಕೆಗಳನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದ್ದು, 10 ವರ್ಷ ಪೂರೈಸಿದೆ. ಈ ಅಂಗವಾಗಿ ಆಮಂತ್ರಣ ಮುಂದೆ ಟ್ರಸ್ಟ್ ಆಗಿ ಬದಲಾವಣೆಗೊಂಡಿದೆ.