ನಾರಾವಿ: ನಾರಾವಿ ರಾಮೇರುಗುತ್ತು ಪದ್ಮರಾಜ ಅಧಿಕಾರಿ ಮತ್ತು ಕರಿಮಣೇಲುಗುತ್ತು ಅನಂತಮತಿಯವರ ಪುತ್ರ ಕರಿಮಣೇಲುಗುತ್ತು ಕೆ. ಸನತ್ ಕುಮಾರ್ ಸೇಮಿತರವರ 96ನೇ ಹುಟ್ಟುಹಬ್ಬದ ಪ್ರಯುಕ್ತ ಜೂ. 7ರಂದು ನಾರಾವಿ ಭ| ಶ್ರೀ 1008 ಧರ್ಮನಾಥ ಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಪದ್ಮಾವತಿ ಅಮ್ಮನವರಿಗೆ ಲಕ್ಷ ಹೂವಿನಪೂಜೆ ಹಾಗೂ ನವಗ್ರಹ ಶಾಂತಿ ನಡೆಯಿತು.
ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಬಸದಿಯ ಆಡಳಿತ ಮಂಡಳಿಯ ಸದಸ್ಯರು, ಊರ-ಪರವೂರ ಗಣ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.