ಬೆಳ್ತಂಗಡಿ: ಜೂ.6ರಂದು ಇಂದಬೆಟ್ಟು ಗ್ರಾಮದ ವಾರ್ಡ್ 3 ರಲ್ಲಿ ಪೇರದ್ದಪಲ್ಕೆ ಹಾನಿಬೆಟ್ಟು ತಿರುವಿನ ಪ್ರದೇಶದ ಸರ್ವೇ ನಂಬರ್234/*/ ರಲ್ಲಿ ಬೆಳ್ತಂಗಡಿ ತಹಶೀಲ್ದಾರ್ ರವರ ಆದೇಶ ಸಂಖ್ಯೆ NCRCR 181/2023.24 ರಂತೆ ಸರ್ಕಾರದ ಸ್ವಾಧೀನಕ್ಕೆ ತಹಶೀಲ್ದಾರ್ ಪೃಥ್ವಿ ಸಾನಿಕಂರವರ ನೇತೃತ್ವದಲ್ಲಿ ಪಡೆಯಲಾಯಿತು.
ಈ ಕಾರ್ಯಾಚರಣೆಯಲ್ಲಿ ಇಂದಬೆಟ್ಟು, ನಾವೂರು, ಕನ್ಯಾಡಿ, ಕಡಿರುಧ್ಯಾವರ, ಮಿತ್ತಬಾಗಿಲು, ಮಲವಂತಿಗೆ, ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಅಧಿಕಾರಿಗಳಿಗೆ ಸಹಕರಿಸಿದರು.
ಬೆಳ್ತಂಗಡಿ ಮನೆಗಾರ್(RI), ಇಂದಬೆಟ್ಟು VA, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ, ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲಿಸ್ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಸ್ವಾಧೀನ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಇಂದಬೆಟ್ಟು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅನಂದ ಅಡಿಲು ಹಲವು ದಶಕಗಳಿಂದ ಬೇಡಿಕೆ ಇರುವ ಹಾಗೂ ಇದರ ಬಗ್ಗೆ ನಿರಂತರವಾಗಿ ಸಾರ್ವಜನಿಕರು ಹಲವು ವರ್ಷಗಳಿಂದ ಗ್ರಾಮ ಸಭೆಗಳಲ್ಲಿ ಹೋರಾಟ ಮಾಡುತ್ತಿದ್ದು, ಈ ಭಾಗದಲ್ಲಿ ಮೆಸ್ಕಾಂ ಇಲಾಖೆಯಿಂದ ಸಬ್ ಸ್ಟೇಷನ್ ನಿರ್ಮಾಣ ಆಗುವ ಉದ್ದೇಶದಿಂದ ಸರ್ವೇ ನಂಬರ್ 234 */ ರಲ್ಲಿ ಸೂಕ್ತ ಸ್ಥಳವೆಂದು ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರ ಆಗ್ರಹದಂತೆ ಇಂದಬೆಟ್ಟು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡು ತಹಶೀಲ್ದಾರ ಮೂಲಕ ಈ ಪ್ರಕ್ರಿಯೆ ನಡೆದು ಸ್ವಾಧೀನ ಪ್ರಕ್ರಿಯೆ ನಡೆದಿರುವುದು ಇದು ಸಮಸ್ತ ಗ್ರಾಮಸ್ಥರ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ. ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಮತ್ತು ಸಹಕಾರ ನೀಡಿದ ಸಮಸ್ತರಿಗೂ ವಂದನೆಗಳು ಸಲ್ಲಿಸುತ್ತಾ, ಮುಂದೆಯೂ ಅಧಿಕಾರಿಗಳಿಗೆ ಸಮಸ್ತ ಗ್ರಾಮಸ್ಥರ ಪರವಾಗಿ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.
ಭಾಗವಹಿಸಿದ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಇಂದಬೆಟ್ಟು ಗ್ರಾಮ ಪಂಚಾಯತ್ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.