ಧರ್ಮಸ್ಥಳ: ಬೊಳಿಯಾರ್ ನಲ್ಲಿ ಕಾಡಾನೆಯೊಂದು ದಾಳಿ ಮಾಡಿದ ಹಿನ್ನಲೆಯಲ್ಲಿ ವಾಹನ ಜಖಂಗೊಂಡಿದೆ. ದಿನೇಶ್ ಎಂಬವರಿಗೆ ಸೇರಿದ ಕೆಎ 70 3271 ನಂಬರಿನ ಆಟೋ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಚಾಲಕನಿಗೆ ಗಾಯಗಳಾಗಿಲ್ಲ.


ಬಾಡಿಗೆಗೆಂದು ತೆರಳುವ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು ಚಾಲಕ ರಿಕ್ಷಾ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಆನೆ ಆಟೋವನ್ನು ಎತ್ತಿ ಬಿಸಾಕಿದೆ. ಆಟೋ ಚಾಲಕ ದಿನೇಶ್ ಧರ್ಮಸ್ಥಳದ ಕಲ್ಲೇರಿಯಲ್ಲಿ ಬಾಡಿಗೆ ಮಾಡಿಕೊಂಡು ಜೀವನ ಮಾಡುತ್ತಿದ್ದರು.