ಬೆಳ್ತಂಗಡಿ: ಧರ್ಮಸ್ಥಳದ ಬೊಳಿಯಾರ್ ನಿವಾಸಿ, ಏರೋಸ್ಪೇಸ್ ಉದ್ಯೋಗಿ, ಪಂಜಾಬ್ ನ ಜಲಂದರ್ ನಲ್ಲಿರುವ ಕಾಲೇಜಿನಲ್ಲಿ ಅನುಮಾನಾಸ್ಪದವಾಗಿ ಮೇ. 18ರಂದು ಸಾವನ್ನಪ್ಪಿರುವ ಪ್ರಕರಣಕ್ಕೆ ನ್ಯಾಯ ಒದಗಿಸಿ ಎಂದು ಆಕಾಂಕ್ಷ ಹೆತ್ತವರು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ರವರನ್ನು ಭೇಟಿಯಾಗಿದ್ದಾರೆ.

ಪಂಜಾಬ್ ನ ಲವ್ಲಿ ಪ್ರೊಫೇಷನಲ್ ಕಾಲೇಜಿನ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ವಿರುದ್ಧ ಹಾಗೂ ಸಂಸ್ಥೆಯ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ, ತನಿಖೆ ಸರಿಯಾಗಿ ನಡೆಯುವ ಬಗ್ಗೆ ಆಕಾಂಕ್ಷ ಕುಟುಂಬದವರಿಗೆ ಅನುಮಾನವಿದೆ.

ಈ ಹಿನ್ನಲೆಯಲ್ಲಿ ರಾಜ್ಯದ ನಾಯಕರನ್ನು ಭೇಟಿಯಾಗಿ ನ್ಯಾಯಯುತ ತನಿಖೆಯಾಗುವಂತೆ ಸಹಕರಿಸಲು ಒತ್ತಾಯಿಸುತ್ತಿದ್ದಾರೆ. ಬಿ.ಕೆ. ಹರಿಪ್ರಸಾದ್ ರವರನ್ನು ಆಕಾಂಕ್ಷ ತಂದೆ ಸುರೇಂದ್ರ, ತಾಯಿ ಸಿಂಧೂದೇವಿ ಹಾಗೂ ಅಣ್ಣ ಆಕರ್ಷ್ ಭೇಟಿಯಾಗಿ ಮನವಿ ನೀಡಿದ್ದಾರೆ.