ನಾರಾವಿ: ಸುಮಾರು 37 ವರ್ಷಗಳಿಂದ ವೇಣೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಮೇ. 31ರಂದು ಸೇವೆಯಿಂದ ನಿವೃತ್ತಿ ಹೊಂದಿದ ವೆಂಕಪ್ಪ ನಾಯ್ಕ ಇವರಿಗೆ ಗೌರವ ಸಲ್ಲಿಸಿ, ಬೀಳ್ಕೊಡುವ ಸಮಾರಂಭ ಜೂ. 2ರಂದು ನಾರಾವಿ ಅರಣ್ಯ ವಿಶ್ರಾಂತಿ ಗೃಹದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವೇಣೂರು ವಲಯ ಅರಣ್ಯ ಅಧಿಕಾರಿಗಳಾದ ಸುಬ್ರಮಣ್ಯ ಆಚಾರಿ, ಉಪವಲಯ ಅರಣ್ಯ ಅಧಿಕಾರಿಗಳಾದ ಸುನಿಲ್ ಕುಮಾರ್, ಹರಿಪ್ರಸಾದ್, ಗಸ್ತು ಅರಣ್ಯಪಾಲಕರಾದ ಮಂಜುನಾಥ್, ಸುರೇಶ, ಈಶ್ವರ ಮುಕ್ರಿ, ದಿವಾಕರ, ಮಂಜುನಾಥ್ ಸವಳಿ, ಅರಣ್ಯ ವೀಕ್ಷಕ ಮಂಜುನಾಥ, ಕಚೇರಿ ಸಿಬ್ಬಂದಿಗಳು, ಹಾಗೂ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.